ಬೈಕ್​​ನಲ್ಲಿ ಹೆಣದ ಜೊತೆ ತ್ರಿಬಲ್ ರೈಡ್ ಹೋಗಿ ಶವವನ್ನು ಎಸೆದ ಮೂವರ ಬಂಧನ

Webdunia
ಭಾನುವಾರ, 8 ಜನವರಿ 2023 (18:23 IST)
ಇತ್ತೀಚಿನ ದಿನಗಳಲ್ಲಿ ಮನುಷ್ಯ ಎಷ್ಟೆಲ್ಲಾ ಕ್ರೂರತ್ವ ಮೆರೆಯುತ್ತಿದ್ದಾನೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಬೆಂಗಳೂರಿನಲ್ಲಿ ಜನವರಿ ಎರಡನೇ ತಾರೀಖಿನಂದು ನಿಬಾಶೀಶ್ ಪಾಲ್ ಎಂಬುವವನನ್ನು ರೀನಾ, ಗಂಗೇಶ್ ಹಾಗೂ ಬಿಜೋಯ್ ಕೊಲೆ ಮಾಡಿದ್ದಾರೆ. ಬಳಿಕ ಯಾರಿಗೂ ಅನುಮಾನ ಬಾರದಂತೆ ಬೈಕ್​​ನಲ್ಲಿ ಹೆಣದ ಜೊತೆ ತ್ರಿಬಲ್ ರೈಡ್ ಹೋಗಿ ಶವವನ್ನು ಎಸೆದು ಬಂದಿದ್ದಾರೆ. ಇದೀಗ ರೀನಾ, ಗಂಗೇಶ್ ಹಾಗೂ ಬಿಜೋಯ್​​ರನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ನಿಬಾಶೀಶ್ ಪಾಲ್ ಹಾಗೂ ರೀನಾಗೆ ಅನೈತಿಕ‌ ಸಂಬಂಧ ಇತ್ತು. ರೀನಾಳ ಗಂಡ ಗಂಗೇಶ್​​ ಉತ್ತರ ಪ್ರದೇಶದಲ್ಲಿ ವಾಸವಿದ್ದ. ನಿಬಾಶೀಶ್ ಪಾಲ್ ರೀನಾಗೆ ಕಿರುಕುಳ ಕೊಡಲು ಶುರು ಮಾಡಿದ್ದನಂತೆ. ಇದಕ್ಕೆ ಬೇಸತ್ತ ಈಕೆ ಗಂಡನನ್ನು ಕರೆಸಿದ್ದಾಳೆ. ಬಳಿಕ ಗಂಡನೊಂದಿಗೆ ಸೇರಿ ನಿಬಾಶೀಶ್​​​ಗೆ ಕಂಠಪೂರ್ತಿ ಕುಡಿಸಿ, ಸೀರೆಯಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಮೂವರು ಆರೋಪಿಗಳನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೆಂಗಳೂರು ಕ್ವಾರಿ ದುರಂತದಲ್ಲಿ ಗಾಯಗೊಂಡವರನ್ನು ಭೇಟಿ ಮಾಡಿ ಗಂಭೀರ ಆರೋಪ ಮಾಡಿದ ಆರ್ ಅಶೋಕ್

ಕೇತನ್ ಅಗರ್ವಾಲ್ ಕೇಸ್ ಬೆನ್ನಲ್ಲೇ ರಾಜ ರಘುವಂಶಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಇಷ್ಟೆಲ್ಲಾ ಮಾಡಿದ್ರೂ ಕೇತನ್ ಅಗರ್ವಾಲ್ ಹತ್ಯೆ ಮಾಡಿದ್ದಕ್ಕೆ ಸಿಯಾ ಗೋಯಲ್ ಗೆ ಶಿಕ್ಷೆಯಾಗೋದು ಅಷ್ಟು ಸುಲಭವಲ್ಲ

ದಬ್ಬಾಳಿಕೆ ಮಾಡುವುದನ್ನು ಬಿಟ್ಟು ರೈತರ ಜೊತೆ ಸಮಾಲೋಚನೆ ಮಾಡಿ: ಬಿ.ವೈ.ವಿಜಯೇಂದ್ರ

Video ಹೆತ್ತ ತಾಯಿಗೆ ಹೀಗೆ ಮಾಡೋದಾ.. ಹೆತ್ತ ಮಗನ ವರ್ತನೆಗೆ ಛೀಮಾರಿ ಹಾಕಿದ ಜನ

ಮುಂದಿನ ಸುದ್ದಿ
Show comments