Select Your Language

Notifications

webdunia
webdunia
webdunia
webdunia

ಸುಮಲತಾರಷ್ಟು ಚೆನ್ನಾಗಿ ನಾಟಕ ಮಾಡೋಕೆ ಯಾರಿಗೂ ಬರೋಲ್ವಂತೆ…!

ಸುಮಲತಾರಷ್ಟು ಚೆನ್ನಾಗಿ ನಾಟಕ ಮಾಡೋಕೆ ಯಾರಿಗೂ ಬರೋಲ್ವಂತೆ…!
ಮಂಡ್ಯ , ಗುರುವಾರ, 28 ಮಾರ್ಚ್ 2019 (19:56 IST)
ಐಟಿ ದಾಳಿ ಜೆಡಿಎಸ್ ನಾಯಕರಿಗೆ ಶಾಕ್ ನೀಡಿರುವ ಬೆನ್ನಲ್ಲೇ ಆ ಮುಖಂಡರೆಲ್ಲ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಐಟಿ ದಾಳಿ ಹಿಂದೆ ಸುಮಲತಾ ಕೈವಾಡ ಇದೆ. ಬಿಜೆಪಿ ಮುಖಂಡರು ಪಟ್ಟಿ ಮಾಡಿಕೊಟ್ಟಿದ್ದಾರೆ ಅದರಂತೆ ದಾಳಿ ನಡೆದಿದೆ. ಹೀಗಂತ ಸಚಿವ ಸಿ.ಎಸ್.ಪುಟ್ಟರಾಜು ಹೇಳಿಕೆ ನೀಡಿದ್ದಾರೆ.  

ಇವರಷ್ಟು ಚೆನ್ನಾಗಿ ನಾಟಕ ಮಾಡೋಕೆ ಯಾರಿಗೂ ಬರಲ್ಲ. ನಾಟಕ ಮಾಡುವವವರಿಗೆ ಮಂಡ್ಯದ ಜನ ಏನು ಅಂತ ತೋರಿಸುತ್ತೇವೆ. ಇವತ್ತಿಂದ ಜೆಡಿಎಸ್ ಏನು ಅಂತ ತೋರಿಸುತ್ತೇವೆ ಎಂದ್ರು.  

ಬಿಜೆಪಿ ಮುಖಂಡರು ಪಟ್ಟಿ ಮಾಡಿಕೊಟ್ಟಿದ್ದಾರೆ ಅದರಂತೆ ದಾಳಿ ನಡೆದಿದೆ ಎಂದ ಅವರು,  ಸುಮಲತಾ ನಾಟಕವಾಡಿ ರಾಜಕೀಯಕ್ಕೆ ಬಂದವರು. ಇವರ ನಾಟಕ ನೋಡಿ ನಮ್ಮ ಅಭ್ಯರ್ಥಿಯೇ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಹೀಗೂ ನಾಟಕ ಮಾಡಬಹುದಾ ಅಂತ? ಇದು ಐಟಿ ದಾಳಿ ಅಲ್ಲ, ಐಟಿ ರಾಜಕೀಯ ಇದು ಎಂದು ಟೀಕೆ ಮಾಡಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಸಚಿವರಿಗೆ ಬಿಗ್ ಶಾಕ್