Select Your Language

Notifications

webdunia
webdunia
webdunia
webdunia

ಗಣೇಶ ಹಬ್ಬದ ಸಡಗರದ ಬೆನ್ನಲ್ಲೇ ರಾಜಧಾನಿಗರಿಗೆ ಮತ್ತೊಂದು ಆತಂಕ

ಗಣೇಶ ಹಬ್ಬದ ಸಡಗರದ ಬೆನ್ನಲ್ಲೇ ರಾಜಧಾನಿಗರಿಗೆ ಮತ್ತೊಂದು ಆತಂಕ
bangalore , ಶುಕ್ರವಾರ, 10 ಸೆಪ್ಟಂಬರ್ 2021 (21:05 IST)
ಗಣೇಶ ಹಬ್ಬದ ಸಡಗರದ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನ ಜನರಿಗೆ ಮತ್ತೊಂದು ಆತಂಕ ಎದುರಾಗಿದೆ.
 
ಕೊರೊನಾ ಸೋಂಕು ಆರ್ಭಟ ಮುಂದುವರೆಯುತ್ತಿರುವಾಗಲೆ ನಗರದಲ್ಲಿ ಕೊರೊನಾ ಸೋಂಕಿನ  ರೂಪಾಂತರಿ ಡೆಲ್ವಾ ವೈರಸ್ ನ 2 ಉಪ-ಪ್ರಬೇಧಗಳು ಪತ್ತೆಯಾಗಿದೆ.
 
ಭಾರತದ ಜೀನೋಮಿಕ್ಸ್ ಹೇಳಿಕೆ ಪ್ರಕಾರ ಡೆಲ್ವಾ ರೂಪಾಂತರದ ಎರಡು ಉಪ-ವಂಶಾವಳಿಗಳಾದ AYA ಮತ್ತು AY12 ಬೆಂಗಳೂರಿನಲ್ಲಿ ಪತ್ತೆಯಾಗಿದೆ. ಇಸ್ರೇಲ್‌ನಲ್ಲಿ ಕೋವಿಡ್ -19 ಉಲ್ಬಣಕ್ಕೆ ಕಾರಣವಾಗಿದ್ದ AY12 ಉಪವರ್ಗವು ಬೆಂಗಳೂರಿನಲ್ಲಿ ಕಾಣಿಕೊಂಡಿದ್ದು ಎಲ್ಲರ ಆತಂಕಕ್ಕೂ ಕಾರಣವಾಗಿದೆ. ಇನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ 400 ಸ್ಯಾಂಪಲ್‌ಗಳ ಪೈಕಿ ಒಂದಿಷ್ಟು ಜನರಲ್ಲಿ ಈ ರೂಪಾಂತರಿ ಕಂಡು ಬಂದಿದೆ. ಹಾಗೂ ಈ ವೈರಸ್‌ನಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಬಿಬಿಎಂಪಿ ವಿಶೇಷ ಆಯುಕ್ತರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ವಿವಿದೆಡೆ ಇಂದಿನಿಂದ 12ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆ