Webdunia - Bharat's app for daily news and videos

Install App

ಅನಂತಪುರ ದೇವಾಲಯದಲ್ಲಿ ಮತ್ತೊಂದು ದೇವರ ಮೊಸಳೆ ಪ್ರತ್ಯಕ್ಷ!

Webdunia
ಭಾನುವಾರ, 12 ನವೆಂಬರ್ 2023 (10:08 IST)
Photo Courtesy: facebook
ಕಾಸರಗೋಡು: ಗಡಿನಾಡು ಕಾಸರಗೋಡಿನ ಅನಂತಪುರ ಶ್ರೀ ಪದ್ಮನಾಭ ಕ್ಷೇತ್ರದಲ್ಲಿ ಮತ್ತೊಂದು ದೇವರ ಮೊಸಳೆ ಪ್ರತ್ಯಕ್ಷವಾಗಿದೆ.

ಸರೋವರ ದೇವಾಲಯ ಎಂದೇ ಪ್ರಸಿದ್ಧಿಯಾಗಿರುವ ಅನಂತಪುರದಲ್ಲಿ ಬಬಿಯಾ ಎಂಬ ದೇವರ ಮೊಸಳೆಯಿತ್ತು. ಇದು ಏಕೈಕ ಸಸ್ಯಾಹಾರಿ ಮೊಸಳೆ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಈ ಮೊಸಳೆ ಕಳೆದ ವರ್ಷ ಅಕ್ಟೋಬರ್ ನಲ್ಲಿ ದೇವರ ಗರ್ಭಗುಡಿಯ ಎದುರು ಬಂದು ಪ್ರಾಣ ಬಿಟ್ಟಿತ್ತು.

ಇದೀಗ ಒಂದು ವರ್ಷದ ಬಳಿಕ ಅದೇ ಜಾಗದಲ್ಲಿ ಮತ್ತೊಂದು ಮೊಸಳೆ ಪ್ರತ್ಯಕ್ಷವಾಗಿದೆ. ದೇವಾಲಯಕ್ಕೆ ಭೇಟಿ ನೀಡಿದ್ದ ಕುಟುಂಬವೊಂದಕ್ಕೆ ಇದು ಮೊದಲ ಬಾರಿಗೆ ದರ್ಶನ ನೀಡಿದೆ. ಮಗುವೊಂದು ಮೊಸಳೆ ನೋಡಬೇಕೆಂದು ಹಠ ಹಿಡಿಯುತ್ತಿದ್ದಾಗ ಕುಟುಂಬಸ್ಥರು ಮೊಸಳೆ ಇಲ್ಲವೆಂದು ಸಮಾಧಾನ ಪಡಿಸುತ್ತಿದ್ದರು. ಈ ವೇಳೆ ಹೊಸ ಮೊಸಳೆ ಪ್ರತ್ಯಕ್ಷವಾಗಿದೆ! ಬಳಿಕ ಆ ಕುಟುಂಬಸ್ಥರು ಅದನ್ನು ದೇವಾಲಯದ ಆಡಳಿತ ಮಂಡಳಿಯವರ ಗಮನಕ್ಕೆ ತಂದಿದ್ದಾರೆ. ಆದರೆ ಮೊದಲು ಯಾರೂ ಇದನ್ನು ನಂಬಿರಲಿಲ್ಲ. ವಿಶೇಷವೆಂದರೆ ಮತ್ತೆ ಅದೇ ಕುಟುಂಬಕ್ಕೆ ಆ ಮೊಸಳೆ ದರ್ಶನ ನೀಡಿದೆ. ಈ ಬಾರಿ ವಿಡಿಯೋ ಕೂಡಾ ಚಿತ್ರೀಕರಿಸಿದ್ದಾರೆ. ಇದೀಗ ಆಡಳಿತ ಮಂಡಳಿ ಕೂಡಾ ಹೊಸ ಮೊಸಳೆಯಿರುವುದು ನಿಜವೆಂದು ಒಪ್ಪಿಕೊಂಡಿದೆ. ಮೊಸಳೆಯ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಾಧಿಕಾರಿ ಏನು ದಾವುದ್ ಇಬ್ರಾಹಿಂ ನಾ, ಇದೆಲ್ಲ ವ್ಯವಸ್ಥಿತ ಸಂಚು: ಪ್ರತಾಪ್ ಸಿಂಹ ಆಕ್ರೋಶ

ರಾಹುಲ್ ಗಾಂಧಿ ಅಜ್ಜಿಯೇ ಮತಗಳ್ಳತನದಿಂದ ಗೆದ್ದಿದ್ದರು: ಆರಗ ಜ್ಞಾನೇಂದ್ರ

ರಾಹುಲ್ ಗಾಂಧಿ ಅವರ ದಿಟ್ಟ ಹೋರಾಟಕ್ಕೆ ಸಂಪೂರ್ಣ ಬೆಂಬಲ: ಡಿಸಿಎಂ ಡಿ.ಕೆ. ಶಿವಕುಮಾರ್

ಮತಗಳ್ಳತನ, ನರೇಂದ್ರ ಮೋದಿಗೆ ಪ್ರಧಾನಿ ಕುರ್ಚಿಯಲ್ಲಿ ಕೂರುವ ನೈತಿಕತೆಯಿಲ್ಲ: ಸಿದ್ದರಾಮಯ್ಯ

ಅನೇಕ ಕ್ಷೇತ್ರಗಳಲ್ಲಿ ಮತಗಳ್ಳತನ: ಪ್ರಧಾನಿ, ಚುನಾವಣಾ ಆಯೋಗದ ವಿರುದ್ಧ ಬೆಂಗಳೂರಿನಲ್ಲಿ ಗುಡುಗಿದ ರಾಹುಲ್‌

ಮುಂದಿನ ಸುದ್ದಿ
Show comments