ಬಿಬಿಎಂಪಿಯಿಂದ ಮತ್ತೊಂದು ಎಡವಟ್ಟಿನ ಯೋಜನೆ

Webdunia
ಶನಿವಾರ, 11 ಮಾರ್ಚ್ 2023 (17:03 IST)
ಹಣ ಲೂಟಿಗೆ ಅಂತ ಬಿಬಿಎಂಪಿ ಹೊಸ ಯೋಜನೆಗೆ ಪ್ಲಾನ್ ಮಾಡಿದೆ.ಸಾರ್ವಜನಿಕ ತೆರಿಗೆ ಹಣ ಪೋಲ್ ಮಾಡಲು ಪಾಲಿಕೆ ಅಧಿಕಾರಿಗಳು ಪ್ಲಾನ್ ಮಾಡಿದ್ದು,ಸಾರ್ವಜನಿಕರ ತೆರಿಗೆ ಹಣ ದುಂದು ವೆಚ್ಚಕ್ಕೆ ಸಿದ್ದತೆ ಮಾಡಿಕೊಂಡಿದ್ದಾರೆ.
 
ವಿಧಾನಸಭೆ ಚುನಾವಣೆ ಗೂ ಮುನ್ನ ಪಾಲಿಕೆ ಖಜಾನೆ ಲೂಟಿ ಮಾಡಲು ಅಧಿಕಾರಿಗಳ ಪ್ಲಾನ್ ಮಾಡಿದ್ದು,ಈಗಾಗಲೇ ಟೆಂಡರ್ ಬಿಬಿಎಂಪಿ ಬಿಬಿಎಂಪಿ ಕರೆದಿದೆ.ಬೇಕಾಬಿಟ್ಟಿ ಯೋಜನೆಗಳನ್ನು ರೂಪಿಸಿ ಹಣ ಲೂಟಿಗೆ  ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ.
 
ನಗರದಲ್ಲಿ ಒಣಕಸಕ್ಕೆ ಬೆಂಕಿ ಹಾಕುವುದನ್ನು ತಡೆಗಟ್ಟಲು 270 ಇ.ಬೈಕ್ ಖರೀದಿಗೆ ಟೆಂಡರ್  ಆಹ್ವಾನಿಸಿದ್ದು,ಕೇಂದ್ರ ಸರ್ಕಾರದ ರಾಷ್ಟ್ರೀಯ ವಾಯು ಮಾಲಿನ್ಯ ನಿಯಂತ್ರಣ ಯೋಜನೆ ಅಡಿ ಇ.ಬೈಕ್ ಖರೀದಿ ಮಾಡಲಿದ್ದಾರೆ.ನಾಲ್ಕು ಕೋಟಿ ವೆಚ್ಚದಲ್ಲಿ 270 ಇ.ಬೈಕ್ ಖರೀದಿ ಮಾಡಿ ಪಾಲಿಕೆಯ 243 ವಾರ್ಡ್ ಗಳಿಗೆ ತಲಾ ಒಂದರಂತೆ ಮಾರ್ಷಲ್ ಗಳಿಗೆ ವಿತರಣೆ ಮಾಡಲಿದ್ದಾರೆ.ಜೊತೆಗೆ 27 ವಿಧಾನಸಭ ಕ್ಷೇತ್ರದ ಮೇಲ್ವಿಚಾರಕರಿಗೆ ಬೈಕ್ ವಿತರಣೆ ಮಾಡಲಿದ್ದಾರೆ.ಈ ಬೈಕ್ ನಲ್ಲಿ ಅಗ್ನಿ ನಂದಿಸೋ ಉಪಕರಣಗಳು.. ನೀರು ಸಿಂಪಡಿಸೋ ಯಂತ್ರಗಳನ್ನು ಒಳಗೊಂಡಿರುತ್ತೆ.ಪ್ರತಿ ದಿನ ಮಾರ್ಷಲ್ ಗಳು ವಾರ್ಡನಲ್ಲಿ ಇ.ಬೈಕ್ ಮೂಲಕ ಸಂಚಾರ ಮಾಡಿ ವಾರ್ಡನಲ್ಲಿ ನಿಗಾ ವಹಿಸಬೇಕು.ಹೀಗೆ ಬೈಕ್ ಖರೀದಿ  ಮೂಲಕ ಜನರ ತೆರಿಗೆ ಹಣ ದುಂದು ವೆಚ್ಚಕ್ಕೆ ಪಾಲಿಕೆ ಮುಂದಾಗಿದೆ ಎಂದು ಪಾಲಿಕೆಯ ವಿರುದ್ಧ ಬಿಬಿಎಂಪಿ ಘನತ್ಯಾಜ್ಯ ಘಟಕದ ಮುಖ್ಯ ಇಂಜಿನಿಯರಾದ ಪ್ರವೀಣ್ ಲಿಂಗಯ್ಯ ಆರೋಪ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Nipah Virus: ತಿಳಿದುಕೊಳ್ಳಲೇ ಬೇಕಾದ ಅಂಶಗಳು ಇಲ್ಲಿದೆ

ರಾಷ್ಟ್ರೀಯ ಪ್ಯಾರಾಲಿಂಪಿಕ್ ಪವರ್‌ಲಿಫ್ಟಿಂಗ್: ಪುಷ್ಕರ್ ಸಿಂಗ್ ಧಾಮಿ ಚಾಲನೆ

ಲಕ್ಕುಂಡಿ ನಿಧಿ ಪ್ರಕರಣ: ಗದಗದಲ್ಲಿ ಮಹತ್ವದ ಬೆಳವಣಿಗೆ

ಪೊಂಗಲ್ ಹಬ್ಬದ ಸಂಭ್ರಮದಲ್ಲಿ ಬೆಂಗಳೂರು ಟು ಕೊಟ್ಟಾಯಂ ವಿಶೇಷ ರೈಲು

ಗೌರಿ ಲಂಕೇಶ್‌ ಹತ್ಯೆ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಗೆದ್ದಿದ್ದು ಎಲ್ಲಿ ಗೊತ್ತಾ

ಮುಂದಿನ ಸುದ್ದಿ
Show comments