Webdunia - Bharat's app for daily news and videos

Install App

ಅಂಗನವಾಡಿ ಕೇಂದ್ರಗಳಿಗೂ ಬೆಲೆ ಏರಿಕೆಯ ಎಫೆಕ್ಟ್

Webdunia
ಬುಧವಾರ, 12 ಜುಲೈ 2023 (18:21 IST)
ನಗರದಲ್ಲಿ ಕೆಲವು ದಿನಗಳಿಂದ ಬೆಲೆ ಏರಿಕೆಯ ಎಫೆಕ್ಟ್ ತಟ್ಟಿದೆ. ತರಕಾರಿ, ಸೊಪ್ಪು ದುಬಾರಿಯಾಗಿದೆ.  ಮಾರ್ಕೆಟ್ ಗೆ ಹೋದ್ರೆ ಬೆಲೆ ಏರಿಕೆಯದ್ದೇ ಚರ್ಚೆ.ತರಕಾರಿ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಲೇ ಇದೆ. ತರಕಾರಿ ಖರೀದಿ ಮಾಡೋದೋ ಬೇಡ್ವೊ ಅನ್ನೋ ಪರಿಸ್ಥಿತಿ ಎದುರಾಗಿದೆ. ಇನ್ನೂ ಬೆಲೆ ಏರಿಕೆಯ ಇಫೆಕ್ಟ್ ಇದೀಗ ಅಂಗನವಾಡಿ ಕೇಂದ್ರಗಳಿಗೂ ತಟ್ಟುತ್ತಿದೆ. ಬರಿ ಅನ್ನ ಮತ್ತು ತಿಳಿಸಾರಿಗೆ ಮೊರೆ ಹೋಗುವ ಸ್ಥಿತಿ ಬಂದೊದಗಿದೆ. 
 
 ದುಬಾರಿ ಬೆಲೆಯಿಂದಾಗಿ ಅಂಗನವಾಡಿಗಳಲ್ಲಿ ಒದಗಿಸುತ್ತಿರುವ ಆಹಾರದಲ್ಲಿ ಪೌಷ್ಠಿಕತೆ ಕಡಿಮೆಯಾಗಿದೆ. ಅಂಗನವಾಡಿ ಕೇಂದ್ರಗಳು‌ ನೀಡುತ್ತಿರೋ ಊಟದಲ್ಲಿ ತರಕಾರಿ ತುಂಡುಗಳೆ ನಾಪತ್ತೆಯಾಗಿವೆ.ಇನ್ನು ಅಂಗನವಾಡಿ ಕೇಂದ್ರಗಳು ಇದೀಗ ಬರಿ ಅನ್ನ ಮತ್ತು ತಿಳಿಸಾರಿಗೆ ಮೊರೆ ಹೋಗಿದ್ದಾರೆ. ಮಕ್ಕಳು ಮತ್ತು ಬಾಣಂತಿಯಾರಿಗೆ ಪೌಷ್ಠಿಕ ಆಹಾರ ನೀಡಲಾಗುತ್ತಿತ್ತು. ಆದ್ರೆ ಬೆಲೆ ಏರಿಕೆಯ ಎಫೆಕ್ಟ್ ಗೆ ಬೇಳೆಸಾರು ಮತ್ತು ತಿಳಿಸಾರಿಗೆ ಫಿಕ್ಸ್ ಆಗಬೇಕಿದಂತಹ ಸ್ಥಿತಿ ಇದೆ.
 
ಶಾಲಾ ಬಿಸಿಯೂಟದಲ್ಲಿ ಪೌಷ್ಠಿಕಾಂಶದ ಕೊರತೆ ಎದ್ದು ಕಾಣುತ್ತಿದೆ. ಸರ್ಕಾರ ನೀಡುವ ಅಲ್ಪ ಮೊತ್ತದಲ್ಲಿ ತರಕಾರಿ ಖರೀದಿ ಮಾಡಲು ಸಾಧ್ಯವಾಗದ ಹಿನ್ನೆಲೆ ಅಂಗನವಾಡಿ ಕೇಂದ್ರದಲ್ಲಿ ಬೇಳೆಯೊಂದಿಗೆ ಇತರ ಪೂರಕ ಸಾಂಬಾರು ಪದಾರ್ಥಗಳನ್ನು ಬಳಸಿ ಅಡುಗೆ ಮಾಡುವಂತಾಗಿದೆ. ಹೀಗಾಗಿ ಮಕ್ಕಳಿಗೆ ಪೌಷ್ಟಿಕಾಂಶ ಕೊರೆತೆ ಆಗುವ ಆತಂಕ ಎದುರಾಗಿದೆ. ಸೊಪ್ಪು ಮತ್ತು ತರಕಾರಿ ಖರೀದಿ ಮಾಡಲು ಒಂದು ಮಗುವಿಗೆ ಒಂದು ರೂಪಾಯಿ, ಗರ್ಭಿಣಿಯರಿಗೆ ಎರಡು ರೂಪಾಯಿಯಂತೆ ಸರ್ಕಾರ ಅನುದಾನ ನಿಗದಿ ಮಾಡಿದೆ. ಆದರೆ, ಈಗ ಬೆಲೆ ಏರಿಕೆಯಾಗಿದ್ದು, ಸರ್ಕಾರ ಹೆಚ್ಚು ಅನುದಾನ ನೀಡದೇ ಇರುವುದರಿಂದ ಸಮಸ್ಯೆ ಉಂಟಾಗಿದೆ 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೊಲೆಯಾದ ಸುಹಾಸ್‌ ಶೆಟ್ಟಿ ಮೇಲೆ ಐದು ಕೇಸ್‌ಗಳಿವೆ: ಹೀಗಾಗಿ ಅವರ ಮನೆಗೆ ಭೇಟಿ ನೀಡಿಲ್ಲ ಎಂದ ಪರಮೇಶ್ವರ್‌

ಪಾಕ್‌ಗೆ ಭಾರತ ಮತ್ತೊಂದು ಜಲಾಘಾತ: ಸಿಂಧೂ ನದಿ ಆಯ್ತು, ಈಗ ಮತ್ತೆರಡು ಅಣೆಕಟ್ಟುಗಳ ನೀರಿಗೂ ಕತ್ತರಿ

ದೇಶದ ಏಕತೆಗಾಗಿ ಮೋದಿ ತೆಗೆದುಕೊಳ್ಳುವ ಕ್ರಮಕ್ಕೆ ಕಾಂಗ್ರೆಸ್‌ ಬೆಂಬಲ: ಎಐಸಿಸಿ ಅಧ್ಯಕ್ಷ ಖರ್ಗೆ

ಗಡಿಯಲ್ಲಿ ಹೆಚ್ಚಿದ ಯುದ್ಧಭೀತಿ: ಪ್ರಧಾನಿ ಮೋದಿಯನ್ನು ತುರ್ತಾಗಿ ಭೇಟಿಯಾದ ವಾಯುಸೇನೆ ಮುಖ್ಯಸ್ಥ ಎ.ಪಿ. ಸಿಂಗ್

ಸುಹಾಸ್ ಶೆಟ್ಟಿ ಬೆನ್ನಲ್ಲೇ ಮತ್ತೊಬ್ಬ ಹಿಂದೂ ಕಾರ್ಯಕರ್ತನ ಹತ್ಯೆಗೆ ಸ್ಕೆಚ್‌: ನಾಳೆಯೇ ಡೇಟ್‌ ಫಿಕ್ಸ್‌ ಎಂದು ಪೋಸ್ಟ್‌

ಮುಂದಿನ ಸುದ್ದಿ
Show comments