Publish Date: Wed, 12 Jul 2023 (15:30 IST)
Updated Date: Wed, 12 Jul 2023 (14:52 IST)
ರಾಜ್ಯದಲ್ಲಿ ಹೊಸ ಸರ್ಕಾರ ಬಂದ ಮೇಲೆ ಮೂರು ಕೊಲೆ ನಡೆದಿದೆ.ಜೈನ ಮುನಿಗಳ ಹತ್ಯೆ ,ಬೀದರ್ ನಲ್ಲಿ ಪೊಲಿಸ್ ಕಾನ್ ಸ್ಟೇಬಲ್ ಹತ್ಯೆ ,ಟಿ.ನರಸೀಪುರದಲ್ಲಿ ಹಿಂದು ಕಾರ್ಯಕರ್ತನ ಹತ್ಯೆ .ಈ ಮೂರು ಹತ್ಯೆಗಳನ್ನ ಖಂಡಿಸಿ ಸಾಮಾಜಿಕ ಜಾಲ ತಾಣದಲ್ಲಿ ಹೊಸ ಅಭಿಯಾನ ಶುರುವಾಗಿದೆ.ಗ್ಯಾರಂಟಿ ಕೊಡದಿದ್ದರು ಪರವಾಗಿಲ್ಲ ಜೀವ ತೆಗೆಯಬೇಡಿ.ಶಾಂತಿಯ ತೋಟದಲ್ಲಿ ರಕ್ತದ ಕೋಡಿ ಎಂಬ ಹ್ಯಾಸ್ಟ್ಯಾಗ್ ಮೂಲಕ ಅಭಿಯಾನ ಮಾಡಲಾಗಿದೆ.ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಸದ್ದು ಮಾಡುತ್ತಿದೆ.ರಾಜ್ಯ ಸರ್ಕಾರದ ವಿರುದ್ಧ ಹೊಸ ಅಭಿಯಾನ ಸಾಮಾಜಿಕ ಜಾಲತಾಣದಲ್ಲಿಶುರುವಾಗಿದೆ.