Publish Date: Mon, 25 Nov 2019 (19:05 IST)
Updated Date: Mon, 25 Nov 2019 (19:08 IST)
ಉಪ ಚುನಾವಣೆ ಸಂದರ್ಭದಲ್ಲಿ ಪ್ರಚಾರ ನಿರತ ಸಿಎಂ ಬಿ.ಎಸ್.ಯಡಿಯೂರಪ್ಪನವರ ಬೂಟುಗಳನ್ನು ಅನರ್ಹ ಶಾಸಕ ಆನಂದ ಸಿಂಗ್ ಕೈಯಲ್ಲಿ ಹಿಡಿದ ಘಟನೆ ನಡೆದಿದೆ.
ಅನರ್ಹ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿಯಾಗಿರೋ ಆನಂದ ಸಿಂಗ್, ಸಿಎಂಗೆ ಬೂಟುಗಳನ್ನು ಹಾಕಿಕೊಳ್ಳಲು ಸಹಾಯ ಮಾಡಿದ್ದು ಚರ್ಚೆಗೆ ಕಾರಣವಾಯಿತು.
ಹೊಸಪೇಟೆಯಲ್ಲಿ ನಡೆದ ಪ್ರಚಾರದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಅನರ್ಹ ಶಾಸಕರು ಹಾಗೂ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ಬಿಡುವಿಲ್ಲದ ಪ್ರಚಾರದಲ್ಲಿ ತೊಡಗಿಕೊಂಡಿದ್ದು, ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿದ್ದಾರೆ.