Select Your Language

Notifications

webdunia
webdunia
webdunia
webdunia

ಜಮಖಂಡಿಯಲ್ಲಿ ಆನಂದ್ ಗೆ ಮಹಾದಾನಂದ: ಕೈ ಹಿಡಿದ ಅನುಕಂಪ

ಜಮಖಂಡಿಯಲ್ಲಿ ಆನಂದ್ ಗೆ ಮಹಾದಾನಂದ: ಕೈ ಹಿಡಿದ ಅನುಕಂಪ
ಬಾಗಲಕೋಟೆ , ಮಂಗಳವಾರ, 6 ನವೆಂಬರ್ 2018 (14:23 IST)
ಬಾಗಲಕೋಟೆ ಜಿಲ್ಲೆಯ ಜಮಖಂಡಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ವಿಜಯ ದಾಖಲಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ 96,968 ಮತಗಳನ್ನು ಪಡೆದು, 57492 ಮತ ಪಡೆದ ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ಅವರನ್ನು 39,476 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ದಿವಂಗತ ಸಿದ್ದು ನ್ಯಾಮಗೌಡರ ನಿಧನದಿಂದ ತೆರವಾದ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಅವರ ಪುತ್ರ ಆನಂದ ನ್ಯಾಮಗೌಡ ಆಯ್ಕೆಯಾಗಿದ್ದಾರೆ. ರಾಜ್ಯದ ಐದು ಕ್ಷೇತ್ರಗಳಲ್ಲಿ ಅತಿ ಹೆಚ್ಚು ಅಂದರೆ ಶೇ. 77.17ರಷ್ಟು ಮತದಾನ ಜಮಖಂಡಿಯಲ್ಲಿ ದಾಖಲಾಗಿತ್ತು.

ಅನುಕಂಪದ ಅಲೆ ಹಾಗೂ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಪಕ್ಷಗಳ ಮುಖಂಡರ ಪ್ರಯತ್ನ ಆನಂದ್ ಗೆಲುವಿಗೆ ಪೂರಕವಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಟಿಪ್ಪು ಜಯಂತ್ಯುತ್ಸವದಲ್ಲಿ ಮೆರವಣಿಗೆ ನಿಷೇಧವೆಂದ ಡಿಸಿಎಂ