Select Your Language

Notifications

webdunia
webdunia
webdunia
webdunia

ಮೂತ್ರ ವಿಸರ್ಜನೆಗೆ ಅನುಮತಿ ಕೇಳಿದ್ದಕ್ಕೆ ಹಿಗ್ಗಾಮುಗ್ಗಾ ಥಳಿತ

ಮೂತ್ರ ವಿಸರ್ಜನೆಗೆ ಅನುಮತಿ ಕೇಳಿದ್ದಕ್ಕೆ ಹಿಗ್ಗಾಮುಗ್ಗಾ ಥಳಿತ
ಹುಬ್ಬಳ್ಳಿ , ಮಂಗಳವಾರ, 15 ಅಕ್ಟೋಬರ್ 2019 (17:59 IST)
ಮೂತ್ರ ವಿಸರ್ಜನೆ ಮಾಡಿ ಬರುವೆ ಅಂತ ಅನುಮತಿ ಕೇಳಿದ್ದಕ್ಕೆ ಹಿಗ್ಗಾಮುಗ್ಗಾ ಥಳಿಸಿರೋ ಘಟನೆ ನಡೆದಿದೆ.

ಕುಡಿತದ ಚಟ ಬಿಡಿಸುವ ಶಿಬಿರಕ್ಕೆ ಸೇರಿದ ಕುಡುಕನೊಬ್ಬನಿಗೆ ಶಿಬಿರದಲ್ಲಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ. ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕುಡಿತ ಬಿಡಿಸುವ ಶಿಬಿರ ಏರ್ಪಡಿಸಿತ್ತು.

ಶಿಬಿರಕ್ಕೆ ಹುಬ್ಬಳ್ಳಿಯ ಗೋಪನಕೊಪ್ಪದ ಮಂಜುನಾಥ ಎನ್ನುವರನ್ನ ಕುಡಿತದ ಚಟ ಬಿಡಿಸಲು ಮೂರು ದಿನಗಳ ಹಿಂದೆ ಶಿಬಿರಕ್ಕೆ ದಾಖಲಿಸಲಾಗಿತ್ತು. ಆದ್ರೆ ಮದ್ಯವಸ್ಯನಿ ಮಂಜುನಾಥ, ಮೂತ್ರ ವಿಸರ್ಜನೆಗೆ ಹೋಗಲು ಅನುಮತಿ ಕೇಳಿದ್ದಕ್ಕೆ ಶಿಬಿರದಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದಾರಂತೆ.

ಮಂಜುನಾಥನಿಗೆ ಮೂವರು ವ್ಯಕ್ತಿಗಳು ಬಾಯಲ್ಲಿ ಬಟ್ಟೆ ತುರುಕಿ ಕಟ್ಟಿಗೆಯಿಂದ ಹಿಗ್ಗಾಮುಗ್ಗಾ ಥಳಿಸಿದ ಪರಿಣಾಮ ಮಂಜುನಾಥ ಗಂಭೀರವಾಗಿ ಗಾಯಗೊಂಡಿದ್ದಾನೆ. ಆದರೆ ಆತ ಶಿಬಿರದಿಂದ ಹೊರಹೋದ ನಂತರ ಈ ಘಟನೆ ನಡೆದಿದೆ. ಆತನ ಮೇಲಿನ ಹಲ್ಲೆಗೂ ಶಿಬಿರಕ್ಕೂ ಯಾವುದೇ ಸಂಭದವಿಲ್ಲ. ಹೀಗಂತ ಶಿಬಿರದ ಆಯೋಜಕರು ಹೇಳುತ್ತಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಯುವಕರಿಗೆ ಪ್ರೆಗ್ನೆನ್ಸಿ ಟೆಸ್ಟ್ ಗೆ ಸೂಚಿಸಿದ ಡಾಕ್ಟರ್ : ಸುದ್ದಿ ವೈರಲ್