ಬೆಂಗಳೂರು: ಮೊನ್ನೆಯಷ್ಟೇ ವಿಜಯೇಂದ್ರಗೆ ಅಮಿತ್ ಶಾ 10 ನಿಮಿಷ ಚೆನ್ನಾಗಿ ಬೈದ್ರು ಎಂದು ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ರಾಜ್ಯ ಬಿಜೆಪಿಯಲ್ಲೂ ಈಗ ಒಳಬೇಗುದಿ ಹೆಚ್ಚಾಗುತ್ತಿದೆ. ರಾಜ್ಯಾಧ್ಯಕ್ಷ ಬದಲಾವಣೆ ವಿಚಾರವಾಗಿ ಇಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ಬಸನಗೌಡ ಪಾಟೀಲ್ ಯತ್ನಾಳ್, ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರದವರ ತಲೆಗೆ ಬಂದಿದೆ. ಇವನಿಂದ ಪಕ್ಷಕ್ಕೆ ಹಾನಿಯಾಗಿದೆ ಎಂದು. ಪಕ್ಷ ಹೇಗೆ ಸಂಘಟನೆ ಆಗಿದೆ ಎಂದು ಅಮಿತ್ ಶಾ ಕೇಳಿದ್ದಾರೆ. ಅದಕ್ಕೆ ವಿಜಯೇಂದ್ರ, ಯತ್ನಾಳ್ ಉಚ್ಚಾಟನೆಯಾದ ಬಳಿಕ ಪಕ್ಷ ಬಲವಾಗಿದೆ ಎಂದಿದ್ದಾರೆ. ಅದಕ್ಕೆ ಅಮಿತ್ ಶಾ 10 ನಿಮಿಷ ಬೈದಿದ್ದಾರೆ.
ನೀನು ನೋಡಿದ್ರೆ ಹೀಗೆ ಹೇಳುತ್ತೀ. ಆದರೆ ಈಗ ಹಲವರು ನಿನ್ನ ವಿರುದ್ಧವೇ ನಿಂತಿದ್ದಾರಲ್ಲ ಎಂದು ಕೇಳಿದ್ದಾರೆ. ಸೋಮಣ್ಣೋರು, ಬೊಮ್ಮಾಯಿಯವರು ವಿರೋಧ ಮಾಡ್ತಾ ಇದ್ದರು. ಈಗ ಆರ್ ಅಶೋಕ್ ಕೂಡಾ ವಿಜಯೇಂದ್ರನನ್ನು ವಿರೋಧ ಮಾಡ್ತಾ ಇದ್ದಾರೆ.
ಆರ್ ಅಶೋಕ್ ನನ್ನ ಎದುರೇ ಹೇಳಿದ್ದಾರೆ. ಅವನ ಮುಖ ಸಹಿತ ನೋಡಂಗಿಲ್ಲ ಅಂತ. ವಿಜಯೇಂದ್ರ ಬಂದರೆ ನಾಲ್ಕು ಜನ ಎದ್ದು ನಿಲ್ಲಲ್ಲ. ಅಂದರೆ ಅವನ ವಿರೋಧ ಮಾಡುವವರು ಹೆಚ್ಚಾಗಿದ್ದಾರೆ ಎಂದು ಅರ್ಥ ಎಂದು ಯತ್ನಾಳ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.