Select Your Language

Notifications

webdunia
webdunia
webdunia
webdunia

ಆಂಬುಲೆನ್ಸ್ ಚಾಲಕನ ಅವಾಂತರ..!!!

ಆಂಬುಲೆನ್ಸ್  ಚಾಲಕನ ಅವಾಂತರ..!!!
ಬೆಂಗಳೂರು , ಗುರುವಾರ, 1 ಸೆಪ್ಟಂಬರ್ 2022 (14:21 IST)
ಆಯಂಬುಲೆನ್ಸ್ ಚಾಲಕರಿಗೆ ಜೀವ ರಕ್ಷಕರೆಂದು ವಿಶೇಷ ಸ್ಥಾನಮಾನ ನೀಡಲಾಗಿದೆ. ಅವರು ಎಷ್ಟೇ ವೇಗವಾಗಿ ವಾಹನ ಚಲಾಯಿಸಿದರೂ, ಸಂಚಾರ ನಿಯಮ ಬ್ರೇಕ್ ಮಾಡಿದ್ರೂ ಕೂಡ ಕೇಸ್ ಹಾಕಲ್ಲ.
ಆಯಂಬುಲೆನ್ಸ್ ಚಾಲಕರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ನಗರದಲ್ಲಿ ಡ್ರಿಂಕ್ ಅಂಡ್ ಡ್ರೈವ್ ಮಾಡಿದ ಆಯಂಬುಲೆನ್ಸ್ ಚಾಲಕ ವಾಹನವನ್ನು ಅಡ್ಡಾದಿಡ್ಡಿ ಚಲಾಯಿಸಿ ಅವಾಂತರ ಸೃಷ್ಟಿಸಿದ್ದಾನೆ.
 
ಬುಧವಾರ ತಡರಾತ್ರಿ ನಗರದ ವಿಲ್ಸನ್ ಗಾರ್ಡನ್ ಠಾಣಾ ವ್ಯಾಪ್ತಿಯಲ್ಲಿ ಅಡ್ಡಾದಿಡ್ಡಿ ವಾಹನ ಚಾಲನೆ ಮಾಡಿ, ಒಂದೇ ರಸ್ತೆಯಲ್ಲಿ ನಾಲ್ಕು ವಾಹನಗಳಿಗೆ ಡಿಕ್ಕಿ ಹೊಡೆದ ಆಯಂಬುಲೆನ್ಸ್ ಚಾಲಕನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ‌.
 
ಅದೃಷ್ಟವಶಾತ್ ಈ ಘಟನೆಗಳಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆಯಂಬುಲೆನ್ಸ್ ಚಾಲಕ ಸಂಜೀವ್ ಮದ್ಯದ ನಶೆಯಲ್ಲಿ ಹೀಗೆ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುರುಘಾ ಶ್ರೀ: ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ