Select Your Language

Notifications

webdunia
webdunia
webdunia
webdunia

ನೆಮ್ಮದಿಯಾಗಿ ಕೆಲಸ ಮಾಡಲು ಅವಕಾಶ ಕೊಡಿ-ಎಸ್.ಟಿ ಸೋಮಶೇಖರ್

ನೆಮ್ಮದಿಯಾಗಿ ಕೆಲಸ ಮಾಡಲು ಅವಕಾಶ ಕೊಡಿ-ಎಸ್.ಟಿ ಸೋಮಶೇಖರ್
bangalore , ಸೋಮವಾರ, 21 ಆಗಸ್ಟ್ 2023 (13:11 IST)
ತಮ್ಮ ವಿರೋಧಿಗಳ ವಿರುದ್ಧ ಶಿಸ್ತು ಕ್ರಮದ ವಿಚಾರವಾಗಿ ಯಾರನ್ನೂ ಸಸ್ಪೆಂಡ್ ಮಾಡಿ, ತೊಂದರೆ ಮಾಡಿ ಅನ್ನೋದು ನಾನು ಹೇಳಿಲ್ಲ.ನೆಮ್ಮದಿಯಾಗಿ ಕೆಲಸ ಮಾಡಲು ಅವಕಾಶ ನೀಡಿ ಅನ್ನೋದು ನನ್ನ ಚಿಂತನೆ.ಇಬ್ನರನ್ನ ಸಸ್ಪೆಂಡ್ ಮಾಡಿದಾಕ್ಷಣಕ್ಕೆ ಒಳ ಹೊರಗೂ ಇರತಕ್ಕಂತದ್ದು ಬದಲಾಗಲ್ಲ.ಬಿಜೆಪಿಯವರು ಎಲ್ಲಾ ವಾಟ್ಸಾಪ್ ಗ್ರೂಪಲ್ಲಿ ವೀಡಿಯೋ ಹಾಕ್ತಿದ್ದಾರೆ.ಈಶ್ವರಪ್ಪ ಹೇಳಿರುವಂತೆ ವಲಸೆ ಆಗಿರೋರು ಬರೋರು ಬರ್ತಾರೆ, ಹೋಗೋರು ಹೋಗ್ತಾರೆ ಅಂತ ಹೇಳಿಕೆಗಳನ್ನ ಅವೈಡ್ ಮಾಡಿ ಅನ್ನೋದು ನನ್ನ ಚಿಂತನೆ.ನಾನಿರಬಹುದು, ಎಲ್ಲಾ ಪಕ್ಷದ ಕಾರ್ಯಕರ್ತರಿರಬಹುದು.ಒಳ್ಳೆಯ ವಾತಾವರಣ ಇತ್ತು.ಚುನಾವಣೆಗೆ ಮೊದಲು ಸೋಮಶೇಖರ್ ಈಗ ಹೋಗ್ತಾನೆ ಅಂತೆಲ್ಲಾ ಹೇಳಿದ್ರು.ಬಿಜೆಪಿ ಬಿಡಲ್ಲ, ಕಾಂಗ್ರೆಸ್ ಹೋಗಲ್ಲ ಅಂತ ಹೇಳಿದ್ದೆ.ಸಿದ್ದರಾಮಯ್ಯ ಜೊತೆ ಮಾತಾಡಿದ್ದೇ ತಪ್ಪಾ.ಸಿದ್ದರಾಮಯ್ಯ ಅವರ ಜೊತೆ ರಾಜಕಾರಣ ಮಾತಾಡಿಲ್ಲ.ನಮ್ಮ ಕ್ಷೇತ್ರದ ವಿಚಾರ ಮಾತ್ರ ಮಾತಾಡಿದ್ದೇನೆ.ಅದಾದ ಮೇಲೆ ಸೋಮಶೇಖರ್ ಕಾಂಗ್ರೆಸ್ ಎಂಪಿಗೆ ಹೋಗ್ತಾನೆ.ಮಗ ಎಂಎಲ್‌ಎ ಗೆ ನಿಲ್ತಾನೆ.ಬಿಜೆಪಿಯಲ್ಲಿ ಅಪ್ಪ ಮಗನಿಗೆ ಟಿಕೆಟ್ ಕೊಡಲ್ಲ ಅಂತೆಲ್ಲ ಅದನ್ನ ಒಳ್ಳೆಯ ವಾತಾವರಣ ಸೃಷ್ಟಿ ಮಾಡಿ ಅಂತ ಸಿ.ಟಿ ರವಿ ಅವರಿಗೆ ಹೇಳಿದ್ದೇನೆ.ಯಾರನ್ನೇ ಸಸ್ಪೆಂಡ್ ಮಾಡಿದ್ರೆ ಪರಿಹಾರ ಅಲ್ಲ ಎಂದು ಸೋಮಶೇಖರ್ ಸ್ಪಷ್ಟೀಕರಣ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯವರು ಸಾಮಾಜಿಕ ನ್ಯಾಯ ಕೊಡುವುದರಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ : ಪರಮೇಶ್ವರ್