Select Your Language

Notifications

webdunia
webdunia
webdunia
webdunia

ನೌಕಾನೆಲೆಯಲ್ಲಿ ಸ್ಥಳೀಯರ ನಿರ್ಲಕ್ಷ್ಯ ಆರೋಪ

ನೌಕಾನೆಲೆಯಲ್ಲಿ ಸ್ಥಳೀಯರ ನಿರ್ಲಕ್ಷ್ಯ ಆರೋಪ
ಉತ್ತರ ಕನ್ನಡ , ಗುರುವಾರ, 22 ಡಿಸೆಂಬರ್ 2022 (18:19 IST)
ನೌಕಾನೆಲೆಯಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ ಅನ್ಯಾಯವಾಗುತ್ತಿದೆಯೆಂದು ಉತ್ತರ ಕನ್ನಡ ಜಿಲ್ಲೆ ಅರಗಾದ ನೇವಿ ಗೇಟ್ ಎದುರು ವಿವಿಧ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನೌಕಾನೆಲೆ ಗೇಟ್ ಬಂದ್ ಮಾಡಿ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಕಾರ್ಮಿಕರಿಗೆ ಪಿಎಫ್, ಇಎಸ್ಐ, ವಾರದ ರಜೆ ನೀಡುಂತೆ ಅಧಿಕಾರಿಗಳಿಗೆ ಆಗ್ರಹ ಮಾಡಿದರು. ಪ್ರೊಜೆಕ್ಟ್ ಆಫೀಸರ್ ಶಿಂಥಲಕುಮಾರ ಪ್ರತಿಕೃತಿ ಹಿಡಿದು ಮೆರವಣಿಗೆ ನಡೆಸಿದರು. ಬೇಡಿಕೆ ಈಡೇರಿಸುವಂತೆ ಅರಗಾದಿಂದ ಕಾರವಾರದವರೆಗೆ ಪಾದಯಾತ್ರೆ ಮಾಡಿದರು. ನೌಕಾನೆಲೆಯಿಂದ ಸ್ಥಳೀಯರಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದರು. ಪರರಾಜ್ಯದ ಕಂಪನಿಗಳು ಸ್ಥಳೀಯರನ್ನು ನಿರ್ಲಕ್ಷ್ಯ ಮಾಡುತ್ತಿವೆ ಎಂದು ಆರೋಪಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬೆಕ್ಕಿಗೆ ಮಗಳ ಸ್ಥಾನ ಕೊಟ್ಟ ದಂಪತಿ