Webdunia - Bharat's app for daily news and videos

Install App

ಸೇನಾಪಡೆಯಿಂದ ಏರ್ ಶೋ ಪೂರ್ವಭಾವಿ ಪ್ರದರ್ಶನ

Webdunia
ಗುರುವಾರ, 28 ಸೆಪ್ಟಂಬರ್ 2017 (18:42 IST)
ಮೈಸೂರು: ದಸರಾ ಮಹೋತ್ಸವಕ್ಕೆ ಜಿಲ್ಲಾಡಳಿತ ಈ ಬಾರಿ ಭಾರತೀಯ ವಾಯುಸೇನೆ ವತಿಯಿಂದ ಏರ್ ಶೋ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಹೀಗಾಗಿ ಪೂರ್ವಭಾವಿ ಪ್ರದರ್ಶನ ಇಂದು ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆಯಿತು.

ಭಾರತೀಯ ವಾಯುಸೇನೆ ಹೆಲಿಕಾಪ್ಟರ್‍ಗಳು ಆಗಸದಲ್ಲಿ ತಮ್ಮ ಕಸರತ್ತು ಪ್ರದರ್ಶಿಸಿದವು. ವಾಯುಸೇನೆಯ ಹೆಚ್ಎಎಲ್ ನಿರ್ಮಿತ ALH ಹೆಲಿಕಾಪ್ಟರ್, ಎಂಐ 17 ಹಾಗೂ ಎಂಐ 17 ವಿ5 ಹೆಲಿಕಾಪ್ಟರ್‍ಗಳು ಬಾನಂಗಳದಲ್ಲಿ ಬಿರುಸಿನಿಂದ ಹಾರಾಡಿದವು.

ವಾಯುಸೇನೆಯ 9 ಯೋಧರು ಸ್ಲಿತರಿಂಗ್ ಎಂಬ ಕಾರ್ಯಾಚರಣೆ ಪ್ರದರ್ಶಿಸಿದರು. ಎತ್ತರದಲ್ಲಿ ಹಾರುತ್ತಿದ್ದ ಹೆಲಿಕಾಪ್ಟರ್‍ನಿಂದ ನುಣುಪಾದ ಹಗ್ಗ ಕೆಳಗೆ ಬಿಟ್ಟು ಯೋಧರು ಜಾರಿಕೊಂಡು ತಮ್ಮ ಸನ್ನದ್ಧ ಸ್ಥಿತಿಯನ್ನು ಪ್ರದರ್ಶಿಸಿದರು. ವಾಯುಪಡೆಯ ಯೋಧರು ಪೆಟಲ್ ಡ್ರಾಪಿಂಗ್ ಮತ್ತು ಸ್ಕೈ ಡೈವಿಂಗ್ ಪ್ರದರ್ಶನ ನಾಳೆ ನಡೆಯುವ ಕಾರ್ಯಕ್ರಮದಲ್ಲಿ ನೀಡಲಿದ್ದಾರೆ.

ಭೂದಳಕ್ಕೆ ಸೇರಿದ ಬೆಂಗಳೂರಿನ 30 ಜನರ ಟರ್ನಾಡೊ ತಂಡ ಬೈಕ್ ಗಳಲ್ಲಿ ಗಡಚಿಕ್ಕುವ ಶಬ್ದದೊಂದಿಗೆ 36 ಬಗೆಯ ಕಸರತ್ತು ಪ್ರದರ್ಶಿಸಿದರು.  ಮೈದಾನದಲ್ಲಿ ನೃತ್ಯಭ್ಯಾಸಕ್ಕೆಂದು ಬಂದಿದ್ದ ಸಾವಿರ ಸಂಖ್ಯೆಯ ಮಕ್ಕಳು ಸಾರ್ವಜನಿಕರು ವೀಕ್ಷಿಸಿ ಸಂಭ್ರಮಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರೆಗ್ನೆನ್ಸಿಗೆ ಟ್ರೈ ಮಾಡುತ್ತಿದ್ದರೆ ಮಹಿಳೆಯರು ಇದನ್ನು ಗಮನಿಸಬೇಕು ಅಂತಾರೆ ಡಾ ಪದ್ಮಿನಿ ಪ್ರಸಾದ್

ಅಂದು ಮುಖ್ಯಮಂತ್ರಿ ಆಗುವ ಆಸೆ ಈಡೇರಲಿಲ್ಲ ಎಂದು ಈಗ ಈಡೇರಿಸಿಕೊಳ್ತಾರಾ ಮಲ್ಲಿಕಾರ್ಜುನ ಖರ್ಗೆ

Karnataka Weather: ತಣ್ಣಗಾಯಿತೇ ಮಳೆಯ ಅಬ್ಬರ, ಹವಾಮಾನ ಬದಲಾವಣೆ ತಪ್ಪದೇ ಗಮನಿಸಿ

ಧರ್ಮಸ್ಥಳ: 15 ಶವ ಹೂತಿಟ್ಟ ಸ್ಥಳವನ್ನು ಗುರುತಿಸಿದ ದೂರುದಾರ, ಪ್ರದೇಶಕ್ಕೆ ಗನ್‌ಮ್ಯಾನ್ ಭದ್ರತೆ

ನಾಳೆ ನಾಗರಪಂಚಮಿ: ನಾಗದೋಷಗಳಿಗೆ ಈ ದಿನ ವಿಶೇಷ ಪೂಜೆ ನೆರವೇರಿಸಿದ್ರೆ ದೂರವಾಗುತ್ತೆ ಸಂಕಷ್ಟ

ಮುಂದಿನ ಸುದ್ದಿ
Show comments