Webdunia - Bharat's app for daily news and videos

Install App

ನಮ್ಮನ್ನು ಹಣಿಯುವುದಕ್ಕೇ ಎಸಿಬಿ ತಂದ್ರಾ?: ಜಗದೀಶ್ ಶೆಟ್ಟರ್

Webdunia
ಸೋಮವಾರ, 28 ಆಗಸ್ಟ್ 2017 (11:27 IST)
ಬೆಂಗಳೂರು: ರಾಜ್ಯದಲ್ಲಿ ಎಸಿಬಿಗೆ ಬಿಜೆಪಿ ನಾಯಕರೇ ಟಾರ್ಗೆಟ್ ಆಗುತ್ತಿರುವುದು ನೋಡಿದರೆ ನಮ್ಮನ್ನು ಸಿಕ್ಕಿಸಿ ಹಾಕುವುದಕ್ಕೇ ಕಾಂಗ್ರೆಸ್ ಸರ್ಕಾರ ಈ ಇಲಾಖೆ ಅಸ್ಥಿತ್ವಕ್ಕೆ ತಂದಿರುವ ಹಾಗಿದೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.

 
‘ಸಿಎಂ ಸಿದ್ದರಾಮಯ್ಯ ಮೇಲೆ ಎಸಿಬಿಯಲ್ಲಿ 25 ಪ್ರಕರಣಗಳು ದಾಖಲಾಗಿವೆ. ಆದರೆ  ಒಂದಕ್ಕೂ ಎಫ್ ಐಆರ್ ಹಾಕಿಲ್ಲ. ಕೇವಲ ಬಿಜೆಪಿ ನಾಯಕರನ್ನೇ ಎಸಿಬಿ ಟಾರ್ಗೆಟ್ ಮಾಡುತ್ತಿದೆ’ ಎಂದು ಶೆಟ್ಟರ್ ಕಿಡಿ ಕಾರಿದ್ದಾರೆ.

ಈ ನಡುವೆ ದಲಿತ ಕುಟುಂಬದವರಿಗೆ ತಮ್ಮ ನಿವಾಸದಲ್ಲಿ ಭೋಜನ ಕೂಟ ಏರ್ಪಡಿಸಿರುವ ಬಿಎಸ್ ಯಡಿಯೂರಪ್ಪನವರನ್ನು ಟೀಕಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಸ್ವತಃ ಸಿಎಂ ಸಿದ್ದರಾಮಯ್ಯನವರೇ ದಲಿತ ಕುಟುಂಬದ ಹೆಣ್ಣು ಮಗಳನ್ನು ವಿವಾಹವಾಗಿ ಎಂದು ಕರೆ ನೀಡಿದ್ದಾರೆ. ಹಾಗಿರುವಾಗ ದಲಿತ ಕುಟುಂಬದವರನ್ನು ಮನೆಗೆ ಆಹ್ವಾನಿಸಿ ಸತ್ಕರಿಸುವುದು ತಪ್ಪಾ ಎಂದಿದ್ದಾರೆ.

ಇದನ್ನೂ ಓದಿ.. ದಲಿತ ಕುಟುಂಬದವರನ್ನು ಮನೆಗೆ ಕರೆಸಿ ಬಿಎಸ್ ವೈ ಸತ್ಕಾರ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments