Select Your Language

Notifications

webdunia
webdunia
webdunia
webdunia

ದಲಿತ ಕುಟುಂಬದವರನ್ನು ಮನೆಗೆ ಕರೆಸಿ ಬಿಎಸ್ ವೈ ಸತ್ಕಾರ

ದಲಿತ ಕುಟುಂಬದವರನ್ನು ಮನೆಗೆ ಕರೆಸಿ ಬಿಎಸ್ ವೈ ಸತ್ಕಾರ
ಬೆಂಗಳೂರು , ಸೋಮವಾರ, 28 ಆಗಸ್ಟ್ 2017 (11:04 IST)
ಬೆಂಗಳೂರು: ಚುನಾವಣೆ ಹತ್ತಿರಬರುತ್ತಿದ್ದಂತೆ ಬಿಜೆಪಿ ದಲಿತರ ಓಲೈಕೆಗೆ ಮುಂದಾಗಿದೆ. ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮನೆಯಲ್ಲಿ ಇಂದು ದಲಿತ ಕುಟುಂಬದವರಿಗೆ ಸತ್ಕಾರ ನಡೆಯಲಿದೆ.

 
ಹಿಂದೆ ಬಿಎಸ್ ವೈ ತಮ್ಮ ಆಪ್ತರೊಂದಿಗೆ ಕೆಲವು ದಲಿತ ಕುಟುಂಬದವರ ಮನೆಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸಿದ್ದರಲ್ಲದೆ, ಅವರ ಜತೆ ಕೂತು ಉಪಾಹಾರ ಸೇವಿಸಿದ್ದರು. ಇದೀಗ ಅದೇ ದಲಿತ ಕುಟುಂಬದವರನ್ನು ತಮ್ಮ ಮನೆಗೆ ಆಹ್ವಾನಿಸಿ ಸತ್ಕರಿಸುತ್ತಿದ್ದಾರೆ.

ಹೋಳಿಗೆ, ಎರಡು ಬಗೆ ಪಲ್ಯ, ಸಾಂಬಾರ್, ರಸಂ ಎಂದು ಭರ್ಜರಿ ಅಡುಗೆಯೇ ಬಿಎಸ್ ವೈ ಮನೆಯಲ್ಲಿ ಸಿದ್ಧವಾಗುತ್ತಿದೆ. ಸ್ವತಃ ಬಿಎಸ್ ವೈ ಕುಟುಂಬದವರೇ ಈ ಅಡುಗೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.  33 ದಲಿತ ಕುಟುಂಬಗಳ ಜತೆ ಬಿಎಸ್ ವೈ ಭೋಜನ ಸವಿಯಲಿದ್ದಾರೆ.

ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿರುವ ಬಿಎಸ್ ವೈ ಮನೆಗೆ ಇಂದು ದಲಿತ ಕುಟುಂಬದವರು ಬರಲಿದ್ದಾರೆ. ಇವರಿಗೆ ಬಿಎಸ್ ವೈ ವಿಶೇಷ ಆತಿಥ್ಯ ನೀಡುತ್ತಿದ್ದಾರೆ.

ಇದನ್ನೂ ಓದಿ.. ಉಪೇಂದ್ರ ಮಗಳೂ ಬಣ್ಣ ಹಚ್ಚಲಿದ್ದಾಳೆ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತಿರುಚಿದ ಫೋಟೋ ಪ್ರಕಟಿಸಿ ತಮಾಷೆಗೊಳಗಾದ ಲಾಲೂ ಪ್ರಸಾದ್ ಯಾದವ್