Publish Date: Fri, 12 Jan 2024 (18:00 IST)
Updated Date: Fri, 12 Jan 2024 (18:22 IST)
ಧಾರವಾಡ-ಡೆತ್ನೋಟ್ ಬರೆದಿಟ್ಟು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದ ರಾಜನಗರದಲ್ಲಿ ನಡೆದಿದೆ. ಸುಂದರವ್ವ ಗಂಬೇರ್ ಎಂಬ ಮಹಿಳೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ. ಸ್ವಸಹಾಯ ಸಂಘದಲ್ಲಿ ಪಡೆದ ಸಾಲ ತೀರಿಸಲಾಗದೇ, ಜೊತೆಗೆ ತನ್ನಿಂದ ಸಾಲ ಪಡೆದವರು ವಾಪಸ್ ಕೊಡದೇ ಸತಾಯಿಸಿದ ಬಗ್ಗೆ ಡೆತ್ ನೋಟ್ನಲ್ಲಿ ಬರೆದಿದ್ದಾಳೆ.
ಇನ್ನು ನನ್ನ ಸಾವಿನ ನಂತರ ನನ್ನ ಶವ ಆಸ್ಪತ್ರೆಗೆ ದಾನ ಮಾಡಿ, ನನ್ನ ಬಳಿ ಅಂತ್ಯಸಂಸ್ಕಾರಕ್ಕೆ ಹಣ ಇಲ್ಲ ಎಂದು ಬರೆದು, ತನ್ನ ಎಲ್ಲ ಸಾಲ ತೀರಿಸಲು ಮಗನ ಹೆಸರನ್ನು ಬರೆದಿದ್ದಾಳೆ. ಈ ಪ್ರಕರಣ ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.