Select Your Language

Notifications

webdunia
webdunia
webdunia
webdunia

ವೇಲ್ ನಿಂದ ಲವರ್ ನ ಕತ್ತು ಹಿಸುಕಿದ ಪಾಗಲ್ ಪ್ರೇಮಿ; ಮುಂದೇನಾಯ್ತು?

ವೇಲ್ ನಿಂದ ಲವರ್ ನ ಕತ್ತು ಹಿಸುಕಿದ ಪಾಗಲ್ ಪ್ರೇಮಿ; ಮುಂದೇನಾಯ್ತು?
ತುಮಕೂರು , ಶುಕ್ರವಾರ, 16 ಆಗಸ್ಟ್ 2019 (19:26 IST)
ತಾನು ಪ್ರೀತಿ ಮಾಡುತ್ತಿದ್ದ ಯುವತಿಯ ಕತ್ತನ್ನೇ ಪಾಗಲ್ ಪ್ರೇಮಿಯೊಬ್ಬ ಹಿಸುಕಿರೋ ಘಟನೆ ನಡೆದಿದೆ.

ರಾಜಕೀಯ ಕುಟುಂಬದ ಹಿನ್ನೆಲೆಯ ಯುವಕನೊಬ್ಬ ತನ್ನ ಪ್ರೇಯಸಿಗೆ ಬೇಗ ಮದುವೆ ಆಗೋವಂತೆ ಒತ್ತಡ ಹೇರಿದ್ದಾನೆ. ಆದರೆ ಯುವಕನ ಬೇಡಿಕೆ ತಿರಸ್ಕರಿಸಿರೋ ಯುವತಿ ಓದು ಮುಗಿದ ಬಳಿಕ ಮದುವೆ ಎಂದಿದ್ದಾಳೆ.

ಇದರಿಂದ ಸಿಟ್ಟಿಗೆದ್ದ ಪಾಗಲ್ ಪ್ರೇಮಿ ಯುವತಿ ತೊಟ್ಟಿದ್ದ ವೇಲ್ ನಿಂದಲೇ ಆಕೆಗೆ ಉಸಿರುಗಟ್ಟುವಂತೆ ಕುತ್ತು ಹಿಸುಕಿದ್ದಾನೆ. ಆಕೆ ಸತ್ತಿದ್ದಾಳೆಂದು ತಿಳಿದು ಪರಾರಿಯಾಗಿದ್ದಾನೆ.

ಆದರೆ ವೇಲ್ ನಿಂದ ಕುತ್ತಿಗೆ ಹಿಸುಕಿದ್ದರಿಂದಾಗಿ ಯುವತಿ ಪ್ರಜ್ಞೆ ತಪ್ಪಿದ್ದಳು. ಎಚ್ಚರವಾದಾಗ ನಡೆದ ವಿಷ್ಯವನ್ನು ಪೋಷಕರಿಗೆ ತಿಳಿಸಿದ್ದಾಳೆ.

ತುಮಕೂರು ಜಿಲ್ಲೆ ಶಿರಾ ತಾಲೂಕಿನಲ್ಲಿ ಘಟನೆ ನಡೆದಿದ್ದು, ಮದಲೂರು ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿರೋ ಲಕ್ಷ್ಮೀ ಯವರ ಪುತ್ರ ಮಹಾವೀರ್ ಕೃತ್ಯ ಎಸಗಿರೋ ಆರೋಪಿಯಾಗಿದ್ದಾನೆ. ಆರೋಪಿ ವಿರುದ್ಧ ಶಿರಾ ಠಾಣೆಯಲ್ಲಿ ದೂರು ದಾಖಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಿಎಸ್ವೈಗೆ ಪರೋಕ್ಷ ಎಚ್ಚರಿಕೆ : ನಾನು ಸಚಿವ ಸ್ಥಾನ ಆಕಾಂಕ್ಷಿಯಲ್ಲ ಎಂದ ಶಾಸಕ