Select Your Language

Notifications

webdunia
webdunia
webdunia
webdunia

ಚಲಿಸುತ್ತಿದ್ದ ಕಾರ್ ಸುಟ್ಟು ಕರಕಲು; 10 ಜನರ ಜೀವ ಉಳಿಯಿತು

ಚಲಿಸುತ್ತಿದ್ದ ಕಾರ್ ಸುಟ್ಟು ಕರಕಲು; 10 ಜನರ ಜೀವ ಉಳಿಯಿತು
ಬೆಂಗಳೂರು , ಭಾನುವಾರ, 28 ಜುಲೈ 2019 (19:40 IST)
ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಕಾರು ಸಂಪೂರ್ಣ ಭಸ್ಮವಾಗಿದೆ.

ಈ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ನಡೆದಿದೆ. ಅತ್ತಿಬೆಲೆಯ ರಾಷ್ಟ್ರೀಯ ಹೆದ್ದಾರಿಯ ಫ್ಲೈವೋವರ್ ಮೇಲೆ ಜೆಪಿ ನಗರದಿಂದ ತಮಿಳುನಾಡಿನತ್ತ ತೆರಳುತ್ತಿದ್ದ ಸೈಯದ್ ಎಂಬುವವರಿಗೆ ಸೇರಿದ KA 51 MB 6632 ಸ್ಕಾರ್ಪಿಯೋ ಕಾರಿನ ಎಂಜಿನ್'ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಇನ್ನು ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿದ್ದಾನೆ. ಕಾರಿನಲ್ಲಿದ್ದ ಸುಮಾರು 10 ಜನರನ್ನು ಇಳಿಸಿ ಅಪಾಯದಿಂದ ಪಾರುಮಾಡಿದ್ದಾನೆ.

ಇನ್ನು ಕಾರಿಗೆ ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಅಗ್ನಿಶಾಕ ದಳಕ್ಕೆ  ಕರೆ ಮಾಡಿದ್ದು ಎಲೆಕ್ಟ್ರಾನಿಕ್ ಸಿಟಿಯಿಂದ ಅಗ್ನಿಶಾಮಕ ಬರುವ ವೇಳೆಗೆ ಕಾರು ಸಂಪೂರ್ಣ ಭಸ್ಮವಾಗಿತ್ತು.




Share this Story:

Follow Webdunia kannada

ಮುಂದಿನ ಸುದ್ದಿ

ಹೊಲಕ್ಕೆ ಹೊರಟ ಮಹಿಳೆ ಮೇಲೆ ಏನಾಯ್ತು?