Publish Date: Mon, 07 Aug 2023 (15:40 IST)
Updated Date: Mon, 07 Aug 2023 (15:14 IST)
ಯಶವಂತಪುರ ದಿಂದ ಟಾಟಾ ಇನ್ಸ್ಟಿಟ್ಯೂಟ್ ಮಾರ್ಗವಾಗಿ ಮತ್ತಿಕೆರೆಗೆ ಹೋಗುವ ಸ್ತೆಯಲ್ಲಿ ಬೃಹತ್ ಗಾತ್ರದ ಮರ ಧರೆಗುರುಳಿದೆ.ಹೀಗಾಗಿ ಬಿ.ಎಲ್ ಇಂದ ಮತ್ತಿಕೆರೆಗೆ ಮಾರ್ಗವಾಗಿ ಯಶವಂಪುರಕ್ಕೆ ಬರುವ ಬಸ್ ಗಳ ಮಾರ್ಗ ಬದಲಾವಣೆ
ಮಾಡಲಾಗಿದೆ.ಕಳೆದ ಒಂದು ಗಂಟೆಯಿಂದ ಬಸ್ಗಳ ಮಾರ್ಗ ಬದಲಾವಣೆ ಮಾಡಲಾಗಿದೆ.ಬಿ.ಎಲ್ ಇಂದ ಗೋರಗುಂಟೆಪಾಳ್ಯ ಮಾರ್ಗವಾಗಿ ಯಶವಂತಪುರಕ್ಕೆ ಸಂಚಾರ ಮಾಡುವ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.ಕಳೆದ ಒಂದು ಗಂಟೆಯಿಂದ ಆಫೀಸ್ ಗೆ ಹೋಗುವ ಜನರು ಪರದಾಟ ನಡೆಸಿದ್ದಾರೆ.
ಮಾಹಿತಿ ಇಲ್ಲದೆ ಕಳೆದ ಒಂದು ಗಂಟೆಯಿಂದ ಬಸ್ ನಿಲ್ದಾಣಗಳಲ್ಲಿ ನಿಂತು ಕಾದು ಕಾದು ಜನ ಸುಸ್ತಾಗಿದ್ದಾರೆ.
ಸ್ಥಳಕ್ಕಾಗಮಿಸಿದ ಬಿಬಿಎಂಪಿ ಅರಣ್ಯ ಇಲಾಖೆ ಸಿಬ್ಬಂದಿ ಮರ ತೆರವು ಕಾರ್ಯಚರಣೆ ಮಾಡುತ್ತಿದ್ದಾರೆ. ಬಿಬಿಎಂಪಿ ಸಿಬ್ಬಂದಿ ಹಾಗೂ ಟ್ರಾಫಿಕ್ ಪೊಲೀಸರು ಮರ ತೆರವು ಮಾಡಲು ಮುಂದಾಗಿದ್ದಾರೆ.