Publish Date: Fri, 11 Nov 2022 (17:39 IST)
Updated Date: Fri, 11 Nov 2022 (17:42 IST)
ಜಾರ್ಖಂಡ್ನ ಖುರ್ದ್ ಗ್ರಾಮದಲ್ಲಿ ವಯಸ್ಸಾದ ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ಹೆಬ್ಬಾವನ್ನೇ ಕತ್ತಿಗೆ ಸುತ್ತಿಕೊಂಡಿದ್ದಾನೆ. ಈ ವ್ಯಕ್ತಿಯನ್ನು ಬಿರ್ಜಲಾಲ್ ರಾಮ್ ಭುಯಾನ್ ಎಂದು ಗುರುತಿಸಲಾಗಿದೆ. ಕುಡಿದ ನಶೆಯಲ್ಲಿ ಈ ಹಾವು ವಸ್ತ್ರದಂತೆ ಕಂಡಿದೆಯೋ, ಹಾರದಂತೆ ಕಂಡಿದೆಯೋ ತಿಳಿಸಿಲ್ಲ. ಹಾವು ಈತನ ಕತ್ತನ್ನು ಸುತ್ತುವರಿದಿದೆ. ನಂತರ ಈತನಿಗೆ ಜ್ಞಾನೋದಯವಾಗಿದ್ದು, ಹಾವನ್ನು ಬಿಡಿಸಲು ಪ್ರಯತ್ನಿಸಿದ್ದಾನೆ. ಆದರೆ ಹಾವನ್ನು ಬಿಡಿಸಲು ಸಾಧ್ಯವಾಗಿಲ್ಲ. ನಂತರ ಅಲ್ಲೇ ಇದ್ದ ಕೆಲ ಮಂದಿ ಹಾವನ್ನು ಬಿಡಿಸಲು ಪ್ರಯತ್ನಿಸಿ, ನಂತರ ಯಶಸ್ವಿಯಾಗ್ತಾರೆ. ವ್ಯಕ್ತಿಯ ಸಹಾಯಕ್ಕೆ ಯಾರೂ ಬರದೇ ಇದ್ದಿದ್ದರೆ ವ್ಯಕ್ತಿ ಉಸಿರುಗಟ್ಟಿ ಸಾವನಪ್ಪುತ್ತಿದ್ದ. ಈ ವಿಡಿಯೋ ವೈರಲ್ ಆಗಿದೆ.