Webdunia - Bharat's app for daily news and videos

Install App

ಹತ್ತು ದಿನದ ಹಿಂದೆ ಕಾಣೆಯಾಗಿದ್ದ ವ್ಯಕ್ತಿ ಕೊಲೆಯಾಗಿ ಪತ್ತೆ

A man who was missing ten days ago was found murderedA man who was missing ten days ago was found murdered
Webdunia
ಸೋಮವಾರ, 23 ಜನವರಿ 2023 (18:45 IST)
ಹತ್ತು ದಿನದ ಹಿಂದೆ ಆ ವ್ಯಕ್ತಿ ಕಾಣೆಯಾಗಿದ್ದರು ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು...‌ ಆದರೆ ಇದೀಗ ಕಾಣೆ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದ್ದು ವ್ಯಕ್ತಿಯನ್ನು ಕೊಲೆ ಮಾಡಿ ಜಮೀನಿನಲ್ಲಿ ಹೂತಿಡಲಾಗಿದೆ ಇದೀಗ ಶೋಪರಿಷಗಾಗಿ ಪೊಲೀಸರು ಶವವನ್ನು ಹೊರತೆಗೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ವ್ಯಕ್ತಿ ಹೆಸರು ನಂದೀಶ್ ಹೊಸಕೋಟೆ ತಾಲೂಕಿನ ದೊಡ್ಡ ನಲ್ಲೂರಹಳ್ಳಿ ಗ್ರಾಮದ ವಾಸಿ 10 ದಿನದ ಹಿಂದೆ ಕಾಣೆಯಾಗಿದ್ದ ನಂದೀಶ್ ಇದೀಗ ಮೃತದೇಹವಾಗಿ ಪತ್ತೆಯಾಗಿದ್ದಾರೆ ಪಕ್ಕದ ಗ್ರಾಮದ ಪ್ರತಾಪ್ ಎಂಬವರಿಂದ ದಾರುಣವಾಗಿ ಹತ್ಯೆಗೀಡಾಗಿ ಮಾಲೂರು ಸಮೀಪದ ಬೈರನಹಳ್ಳಿ ಗ್ರಾಮದ ಜಮೀನಿನಲ್ಲಿ ಹೂತಿಡಲಾಗಿತ್ತು ಪೊಲೀಸರ ತನಿಕೆಯಿಂದ ವಿಷಯ ಹೊರಬಂದಿದ್ದು ಇದೀಗ ನಂದೀಶ್ ಮೃತ ದೇಹವನ್ನು ಪೊಲೀಸರು ಹೊರತೆಗೆದು ಶವ ಪರೀಕ್ಷೆಗೆ ರವಾನಿಸಿದ್ದಾರೆ
.
ನಂದೀಶ್ ಕೆಲ ಕಂಪನಿಗಳಲ್ಲಿ ಲೇಬರ್ ಕಾಂಟ್ರಾಕ್ಟರ್ ಆಗಿ ಕೆಲಸವನ್ನು ಮಾಡುತ್ತಿದ್ದರು ಸಾಕಷ್ಟು ಮಂದಿಗೆ ಕೆಲಸ ಕೊಡಿಸಿ ನೆರವಾಗಿದ್ದಾರೆ ಎಂಬ ಮಾತು ಸಹ ಕೇಳಿ ಬಂದಿದೆ ಕಳೆದ ಶುಕ್ರವಾರ ನಾಲ್ಕು ಲಕ್ಷ ಹಣವನ್ನು ತೆಗೆದುಕೊಂಡು ಕಾರ್ಮಿಕರಿಗೆ ನೀಡುವ ಸಲುವಾಗಿ ನಂದೀಶ್ ಮನೆಯಿಂದ ಹೊರಟಿದ್ದರು ಎಂದು ತಿಳಿದುಬಂದಿದ್ದು ಹಣದ ವಿಚಾರಕ್ಕೂ ಅಥವಾ ವೈಯಕ್ತಿಕ ವಿಚಾರಕ್ಕೂ ನಂದೀಶ್ ದಾರುಣವಾಗಿ ಕೊಲೆಯಾಗಿದ್ದಾರೆ ತನಿಕೆಯ ನಂತರ ಕೊಲೆಗೆ ನಿಖರವಾದ ಕಾರಣ ಹೊರ ಬರಬೇಕಿದೆ ನಂದೀಶ್ ಸಾವಿಗೆ ನ್ಯಾಯವನ್ನು ಕುಡಿಸಬೇಕೆಂದು ನಂದೀಶ್ನ ಸಂಬಂಧಿಕರು ಕೇಳಿಕೊಳ್ಳುತ್ತಿದ್ದಾರೆ.ವೈಯಕ್ತಿಕ ದ್ವೇಷವು ಅಥವಾ ಹಣದ ವಿಚಾರಗಳು ತಿಳಿದಿಲ್ಲ ಆದರೆ ನಂದೀಶ್ ಕುಟುಂಬ ಅವರನ್ನೇ ನಂಬಿಕೊಂಡು ಜೀವನವನ್ನು ಸಾಗಿಸುತ್ತಿತ್ತು ಇದೀಗ ಕುಟುಂಬಕ್ಕೆ ಆಧಾರವಾಗಿದೆ ನಂದೀಶ್ ಸಾವನ್ನಪ್ಪಿದ್ದು ನಂದೀಶ್ ಅವರ ಕುಟುಂಬಕ್ಕೆ ಪೊಲೀಸರ ತನಿಕೆಯಿಂದ ನ್ಯಾಯವನ್ನು ಕೊಡಿಸಬೇಕಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments