Select Your Language

Notifications

webdunia
webdunia
webdunia
webdunia

ಹಲವಾರು ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದೆ-ಹೇಮಮಾಲಿನಿ

 ಲೋಕಸಭಾ ಚುನಾವಣಾ

geetha

ಮುಂಬೈ , ಭಾನುವಾರ, 3 ಮಾರ್ಚ್ 2024 (11:00 IST)
ಮುಂಬೈ : ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾದ ಬಳಿಕ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ  ಲೋಕಸಭಾ ಅಭ್ಯರ್ಥಿ ಹೇಮಮಾಲಿನಿ ಶ್ರೀಕೃಷ್ಣನ ಜನ್ಮಸ್ಥಳವಾದ ಮಥುರಾ ನಗರಿಯಲ್ಲಿ ಇನ್ನೂ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದೆ ಎಂದು  ಹೇಳಿದ್ದಾರೆ.
 
ಇದು ನನ್ನ ಮೂರನೇ ಅವಧಿಯ ಸ್ಪರ್ಧೆಯಾಗಿದೆ. ಈ ಅವಧಿಯಲ್ಲಿ ಬೃಹತ್‌ ಮಟ್ಟದ ಕಾರ್ಯಗಳು ನಡೆಯಬೇಕಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ನಾನು ಧನ್ಯವಾದ ಅರ್ಪಿಸಲು ತಿಳಿಸಲು ಬಯಸುತ್ತೇನೆ . ಜೊತೆಗೆ ರಾಷ್ಟ್ರಿಯ ಅಧ್ಯಕ್ಷ ಜೆ.ಪಿ ನಡ್ಡಾ , ಗೃಹಸಚಿವ ಅಮಿತ್‌ ಶಾ ಹಾಗೂ ಸಿಎಂ ಯೋಗಿ ಆದಿತ್ಯನಾಥ್‌ ಅವರಿಗೂ ಕೃತಜ್ಞತೆ ಸಲ್ಲಿಸಬಯಸುತ್ತೇನೆ ಎಂದು ಹೇಮಮಾಲಿನಿ ನುಡಿದರು.

ನಾನಿಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲು ಬಯಸಿದ್ದೆ. ಮೊದಲ ಅವಧಿಯಲ್ಲಿ ಸಾಕಷ್ಟು ಕೆಲಸಗಳು ನಡೆದಿವೆ ಕೂಡಾ ಎಂದ ಹೇಮಮಾಲಿನಿ, ಮೊದಲ ಅವಧಿಗಿಂತ ಎರಡನೇ ಅವಧಿಯಲ್ಲಿ ಹೆಚ್ಚು ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದು ನುಡಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನಕ್ಕೆ ಇಂದಿನಿಂದ ಚಾಲನೆ