Select Your Language

Notifications

webdunia
webdunia
webdunia
webdunia

ಕಲಬುರಗಿಯಲ್ಲಿ ಕಣ್ಮನ ಸೆಳೆದ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆ

ಕಲಬುರಗಿಯಲ್ಲಿ ಕಣ್ಮನ ಸೆಳೆದ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆ
ಕಲಬುರಗಿ , ಬುಧವಾರ, 5 ಫೆಬ್ರವರಿ 2020 (16:03 IST)
ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಇಂದಿನಿಂದ ಮೂರು ದಿನಗಳವೆರೆಗೆ ನಡೆಯುತ್ತಿರೋ  85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಸಮ್ಮೇಳನಾಧ್ಯಕ್ಷರಾದ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅವರ ಭವ್ಯ ಮೆರವಣಿಗೆ ನಡೆಯಿತು.

ಕಲಬುರಗಿ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಭವ್ಯ ಮೆರವಣಿಗೆ ಸಮಾರಂಭ ಉದ್ಘಾಟನೆ ನಡೆಯಿತು. ಕಲಬುರಗಿ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಿಂದ ಆರಂಭಗೊಂಡ ಈ ಸಮ್ಮೇಳನಾಧ್ಯಕ್ಷರ ಮೆರವಣಿಗೆಯು ಸೇಡಂ ರಸ್ತೆಯ ಖರ್ಗೆ ಪೆಟ್ರೋಲ್ ಪಂಪ್ ನಿಂದ ಬಲಕ್ಕೆ ತಿರುಗಿ ರಿಂಗ್ ರಸ್ತೆ ಮೂಲಕ ಕುಸನೂರ ರಸ್ತೆಯ ಮಾರ್ಗದಿಂದ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದ ಪ್ರಧಾನ ವೇದಿಕೆಗೆ ಬಂದು ತಲುಪಿತು.  

ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ಅವರು ಸಮ್ಮೇಳಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಿದ್ರು.

ಈ ಮೆರವಣಿಗೆಯಲ್ಲಿ  ಕಲಬುರಗಿ ಜಿಲ್ಲೆಯ 23 ಕಲಾ ತಂಡಗಳು  ಸೇರಿದಂತೆ ಕೊಪ್ಪಳ, ಗದಗ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ,  ತುಮಕೂರು, ದಾವಣಗೆರೆ, ಧಾರವಾಡ, ಬಳ್ಳಾರಿ, ಬಾಗಲಕೋಟೆ, ಮಂಡ್ಯ, ರಾಯಚೂರು, ಶಿವಮೊಗ್ಗ, ಹಾಸನ, ಆಂಧ್ರ ಗಡಿನಾಡು ಘಟಕ, ಹಾಸನ, ಉಡುಪಿ  ಸೇರಿದಂತೆ ವಿವಿಧ ಜಿಲ್ಲೆಗಳ ಒಟ್ಟು 60 ಕಲಾ ತಂಡಗಳು ಭಾಗವಹಿದ್ದವು.

ವಿವಿಧ ಜಿಲ್ಲೆಗಳ ಡೊಳ್ಳು ಕುಣಿತ, ಹಲಿಗೆ ವಾದನ, ದೊಡ್ಡಾಟ ಕುಣಿತ, ಕರಡಿ ಮಜಲು ಕುಣಿತ ಮತ್ತು ಚರ್ಮವಾದ್ಯ, ಲಂಬಾಣಿ  ಕುಣಿತ, ಪುರವಂತಿಕೆ ಕುಣಿತ, ಹೆಜ್ಜೆಮೇಳ, ರಣ ಹಲಗೆ, ಗೊಂಬೆ ಕುಣಿತ, ಪೋತರಾಜ ಕುಣಿತ, ಭಜನಾ ಮಂಡಳಿ, ವಲಯ ಮಾದೇಶ್ವರ ಬೀಸು ಕಂಸಾಳೆ, ವೀರಗಾಸೆ ಕುಣಿತ, ಕೊಂಬು ಕಹಳೆ, ಸಂಬಳ ವಾಧ್ಯ, ಮೋಜಿನ ಕುಣಿತ ಸಮರ ಕಲೆ, ಕತ್ತಿ ವರಸೆ, ದಾಲಿಪಟ ಸಾಧನ, ಮುಳ್ಳಿನ ಚಕ್ರ, ವೀರಭದ್ರನ ಕುಣಿತ, ನಗಾರಿ, ಜಾನಪದ ನೃತ್ಯ, ಕಿಲು ಕುಣಿತ, ಗಾರುಡಿ ಗೊಂಬೆ, ಹಗಲು ವೇಷಧಾರಿ ಕುಣಿತ, ಸಮಳಾ ಮತ್ತು ನಂದಿಕೂಲು, ಝಾಂಚ್ ಪಥಕ, ಸೋಮನ ಕುಣಿತ, ಗೋರವರ ಕುಣಿತ, ತಮಟೆ ಬೇಸ್ ಡ್ರಮ್, ಬೆಟ್ಟಮೇಳ ಕಲೆ, ನಾಸಿಕ ಡೋಲ, ಯಕ್ಷಗಾನ ಸೇರಿದಂತೆ ವಿವಿಧ ತಂಡಗಳು ಭಾಗವಹಿಸಿ ನೋಡುಗರ ಗಮನ ಸೆಳೆದವು.




Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಲ್ಲೇ ಕಾಣೆ ಆಗ್ತಿದೆ ಎಂದ ಉಪ ಮುಖ್ಯಮಂತ್ರಿ : ಎಚ್ಚರಿಕೆ