Publish Date: Thu, 06 Jun 2024 (16:39 IST)
Updated Date: Thu, 06 Jun 2024 (16:42 IST)
ಬೆಳಗಾವಿ: ಬರ್ತಡೇ ಪಾರ್ಟಿಗೆ ಆಹ್ವಾನಿಸಿ ಗೆಳೆಯನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಯರಗಟ್ಟಿ ತಾಲೂಕಿನ ನುಗ್ಗಾನಟ್ಟಿ ಗ್ರಾಮದಲ್ಲಿ ನಡೆದಿದೆ.
ಹತ್ಯೆಯಾದ ಹುಡುಗನನ್ನು ಬಸವರಾಜ್ ಮುದ್ದಣ್ಣ ಎಂದು ಗುರುತಿಸಲಾಗಿದೆ.
ಎಂಎಸ್ಡಬ್ಲ್ಯೂ ವ್ಯಾಸಂಗ ಮಾಡುತಿದ್ದ ಬಸವರಾಜ್ ಎಂಬಾತನನ್ನು ಆತನ ಸ್ನೇಹಿತ ಮಲ್ಲಿಕಾರ್ಜುನ ಆಹ್ವಾನಿಸಿದ್ದಾನೆ. ಇನ್ನೂ ಬರ್ತಡೇಗೆ ಹೋದ ಬಸವರಾಜ್ ಮೇಲೆ ಆತನ ಗಲಾಟೆ ಆರಂಭಿಸಿ, ಐವರು ಸ್ನೇಹಿತರು ಸೇರಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಇನ್ನೂ ಗಂಭೀರ ಗಾಯಗೊಂಡ ಬಸವರಾಜ್ ಎಂಬವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಈ ಸಂಬಂಧ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.