Select Your Language

Notifications

webdunia
webdunia
webdunia
webdunia

ನೀರು ಪಾಲಾಗಿದ್ದ ಓರ್ವನ ಮೃತದೇಹ ಪತ್ತೆ

ನೀರು ಪಾಲಾಗಿದ್ದ ಓರ್ವನ ಮೃತದೇಹ ಪತ್ತೆ
bangalore , ಮಂಗಳವಾರ, 3 ಜನವರಿ 2023 (19:02 IST)
ಹಾವೇರಿಯಲ್ಲಿ ಹೊಸ ವರ್ಷದಂದು ಈಜಲು ತೆರಳಿದ್ದ ಮೂವರು ಯುವಕರು ನೀರು ಪಾಲಾಗಿದ್ದರು. ಇವರಲ್ಲಿ ಓರ್ವನ ಶವ ನದಿ ದಡದಲ್ಲಿ ನೀರಿನಲ್ಲಿ ತೇಲಿ ಬಂದಿದೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಮುದೇನೂರ ಗ್ರಾಮದ ತುಂಗಭದ್ರಾ ನದಿಯ ಪಂಪಹೌಸ್ ಬಳಿ ಯುವಕರು ನೀರುಪಾಲಾಗಿದ್ದರು. ನವೀನ್ ಕುರಗುಂದ, ವಿಕಾಸ ಪಾಟೀಲ್​​​​, ನೇಪಾಳ ಮೂಲದ ಪ್ರೇಮ್ ಬೋರಾ ನೀರು ಪಾಲಾಗಿದ್ದರು. ಇಬ್ಬರು ಯುವಕರ ಮೃತದೇಹ ಪತ್ತೆಯಾಗಿಲ್ಲ. ಇವರ ಮೃತದೇಹಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ನದಿಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಲಿಂಬಾವಳಿಯನ್ನು ಶಿಕ್ಷೆಗೆ ಒಳಪಡಿಸಿ