Webdunia - Bharat's app for daily news and videos

Install App

ಹಿಟ್ ಅಂಡ್ ರನ್ ಕೇಸ್ ಪತ್ತೆ ಹಚ್ಚಿದ ಬಸವನಗುಡಿ ಸಂಚಾರ ಪೊಲೀಸರು

geetha
ಶನಿವಾರ, 17 ಫೆಬ್ರವರಿ 2024 (14:00 IST)
ಬೆಂಗಳೂರು-ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್ ಕೇಸ್ ನ್ನ ಬಸವನಗುಡಿ ಸಂಚಾರಿ ಪೊಲೀಸರು ಪತ್ತೆಹಚ್ಚಿದ್ದಾರೆ.ಕಳೆದ 12 ತಾರೀಖು ಬಸವನಗುಡಿ ಠಾಣಾ ವ್ಯಾಪ್ತಿಯಲ್ಲಿ  ಘಟನೆ ನಡೆದಿದ್ದು,ಅಪಘಾತ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ ವೇಣು ಎಂಬಾತನ ಬಂಧನ ಮಾಡಲಾಗಿದೆ.ಬೈಕ್ ನಿಂದ ಆಟೋ ಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಿದ್ದ.ಗವಿಪುರ ಎಕ್ಸ್ ಟೆನ್ಸನ್ ನ ರಸ್ತೆಯಲ್ಲಿ  ಅಪಘಾತ ನಡೆದಿತ್ತು.ಅಪಘಾತದಲ್ಲಿ ಆಟೋ ಚಾಲಕ ರಮೇಶ್ (48) ಮೃತಪಟ್ಟಿದ್ದ.ಘಟನೆಗೆ ದ್ವಿಚಕ್ರವಾಹನ ಸವಾರನ ಅತಿವೇಗ ಹಾಗೂ ಅಜಾಗರೂಕತೆಯೇ ಕಾರಣವೆಂದು ತಿಳಿದಿತ್ತು ಆದ್ರೆ ಆರೋಪಿ ವೇಣು ಅಪಘಾತದ ನಂತರ ಎಸ್ಕೇಪ್ ಆಗಿದ್ದ.

ಪ್ರಕರಣ ದಾಖಲಿಸಿಕೊಂಡಿದ್ದ ಬಸವನಗುಡಿ ಪೊಲೀಸರು ತನಿಖೆ ಕೈಗೊಂಡಿದ್ದರು ಆದ್ರೆ ಪೊಲೀಸರಿಗೆ ಆರೋಪಿಯ ಸಣ್ಣ ಸುಳಿವುಸಿಕ್ಕಿರಲಿಲ್ಲ.ಸಿಸಿಟಿವಿಯೊಂದರಲ್ಲಿ ಹಳದಿ ಬಣ್ಣದ ಟಿ ಶರ್ಟ್ ಧರಿಸಿದ್ದದ್ದು ಮಾತ್ರ ಗೊತ್ತಾಗಿತ್ತು.ಆರೋಪಿ ಬೈಕ್ ಗೆ ನಂಬರ್ ಪ್ಲೇಟ್ ಸಹ ಇರಲಿಲ್ಲಮಸುಮಾರು ಎರಡು ದಿನಗಳ ಕಾಲ ಸುಮಾರು 70 ಕ್ಕೂ ಅಧಿಕ ಸಿಸಿಟಿವಿ ಪರಿಶೀಲನೆ ಬಳಿಕ ಆರೋಪಿ ಬಂಧನ ಮಾಡಲಾಗಿದೆ.ಬಸವನಗುಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments