Select Your Language

Notifications

webdunia
webdunia
webdunia
webdunia

ಮೋಡಿಗೆ ಬಿದ್ದ 15ರ ಬಾಲೆ! ಮುಂದೇನಾಯ್ತು?

ಮೋಡಿಗೆ ಬಿದ್ದ 15ರ ಬಾಲೆ! ಮುಂದೇನಾಯ್ತು?
ಬೆಂಗಳೂರು , ಸೋಮವಾರ, 10 ಜನವರಿ 2022 (14:14 IST)
ಬೆಂಗಳೂರು : ಸ್ವಾಮೀಜಿಯ ಮೋಡಿಗೆ ಮರುಳಾದ 15 ವರ್ಷದ ಬಾಲಕಿ ಮನೆಯವರನ್ನು ನಿರಾಕರಿಸಿ ಸ್ವಾಮೀಜಿ ಬಳಿ ಹೋಗಿದ್ದಾಳೆ ಎಂದು ಪೋಷಕರು ದೂರು ದಾಖಲಿಸಿದ್ದಾರೆ.

ಆತ್ಮಾನಂದ ಸರಸ್ವತಿ ಸ್ವಾಮೀಜಿ ವಿರುದ್ಧ ಪೋಷಕರು ದೂರು ನೀಡಿದ್ದು, ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ಪ್ರಕರಣ ದಾಖಲಿಸಿದ್ದಾರೆ. 

ಜನವರಿ 1ರಂದು ಬಾಲಕಿ ಬೆಳಗ್ಗೆ 5:30ರ ಸುಮಾರಿಗೆ ತನ್ನ ತಾಯಿಯೊಂದಿಗೆ ಜಗಳ ಮಾಡಿದ್ದಾಳೆ. ತನ್ನ ತಾಯಿ ಹಾಗೂ ಮಾವ ಅವರನ್ನು ಕೂಡಿ ಹಾಕಿದ ಆಕೆ ಮನೆಯ ಚೀಲಕವನ್ನು ಹೊರಗಿನಿಂದ ಲಾಕ್ ಮಾಡಿಕೊಂಡು ಟಿವಿಎಸ್ ಸ್ಕೂಟರ್ ತೆಗೆದುಕೊಂಡು ಎಲ್ಲೋ ಹೋಗಿದ್ದಳು.

ಮಗಳು ಓದುತ್ತಿದ್ದ ಶಾಲೆ ಹಾಗೂ ತಿಳಿದಿರುವ ಕಡೆಯೆಲ್ಲಾ ಹುಡುಕಾಡಿ ನೋಡಿದಾಗ ಉತ್ತರಹಳ್ಳಿಯ ಸ್ವಾಮೀಜಿ ಮನೆಯ ಎದುರು ದ್ವಿಚಕ್ರವಾಹನ ನಿಂತಿತ್ತು.

ಈ ಹಿಂದೆ ನನ್ನ ಮಗಳಿಗೆ ದೀಕ್ಷೆ ಕೊಡುವುದಾಗಿ ಹೇಳುತ್ತಿದ್ದ ಆತ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಮೇಲೆ ಅನುಮಾನವಿದ್ದು, ಕಾಣೆಯಾಗಿರುವ ನಮ್ಮ ಮಗಳನ್ನು ಹುಡುಕಿಕೊಡುವಂತೆ ದೂರಿನಲ್ಲಿ ತಿಳಿಸಿದ್ದಾರೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಇನ್ನಷ್ಟು ಕಠಿಣ ಕ್ರಮ!