Select Your Language

Notifications

webdunia
webdunia
webdunia
webdunia

ರಾಜರಾಜೇಶ್ವರಿ ಬಿಬಿಎಂಪಿ ಕಾಮಗಾರಿಯಲ್ಲಿ ನಡೆದ ಅವ್ಯವಹಾರದಲ್ಲಿ 11 ಮಂದಿ ಇಂಜಿನಿಯರ್ ಗಳ ಅಮಾನತು

11 engineers suspended in Rajarajeshwari BBMP work scandal
bangalore , ಶುಕ್ರವಾರ, 16 ಜೂನ್ 2023 (14:04 IST)
ಬಿಬಿಎಂಪಿ ವ್ಯಾಪ್ತಿಯ ರಾಜರಾಜೇಶ್ವರಿ ನಗರ ವಲಯದಲ್ಲಿ ನಡೆದ ಕಾಮಗಾರಿಗಳಲ್ಲಿ ಸರ್ಕಾರಿ ಹಣವು ದುರುಪಯೋಗವಾಗಿರುವ ಬಗ್ಗೆ ಉನ್ನತ ಮಟ್ಟದ ಸಮಿತಿ ರಚಿಸಲು ಲೋಕಾಯುಕ್ತರು ಆದೇಶ ನೀಡಿದ್ದಾರೆ.ಕಾಮಗಾರಿಯಲ್ಲಿ ನಡೆದ ಅವ್ಯವಹಾರದಲ್ಲಿ 11 ಮಂದಿ ಇಂಜಿನಿಯರ್ ಗಳನ್ನ ಅಮಾನತು ಮಾಡಲಾಗಿದೆ.
 ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಿಕೆ ಸುರೇಶ್  ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ದೂರು ಸಲ್ಲಿಸಿದ್ದರು. 2019-20 ನೇ ಸಾಲಿಗೆ ಹಂಚಿಕೆ ಮಾಡಲಾದ ಅನುದಾನವನ್ನ 2019ರಲ್ಲಿ  ಕೆಲಸದ ಆದೇಶಗಳನ್ನು ಪಡೆದು  ಯಾವುದೇ ಕಾಮಗಾರಿಗಳನ್ನು ಅನುಷ್ಠಾನಗೊಳಿಸದೆ ಬಿಲ್ಲುಗಳನ್ನು ಸೃಷ್ಟಿಸಲಾಗಿದೆ.  ಜೊತೆಗೆ ಕೆ ಆರ್ ಐ ಡಿ ಎಲ್ ಮೂಲಕ ಗುತ್ತಿಗೆದಾರರಿಗೆ ಹಣವನ್ನು ನೀಡಲಾಗಿದೆ. ಈ ಕಾಮಗಾರಿಯಲ್ಲಿ ಸುಮಾರು 250 ಕೋಟಿ ರೂಪಾಯಿಗಳ ಅವ್ಯವಹಾರವಾಗಿದೆ ಎಂದು ಸಲ್ಲಿಸಲಾಗಿತ್ತು. ಮೇಲ್ನೋಟಕ್ಕೆ ಆರೋಪ ಸಾಬಿತಾದಾಗಿರುವುದರಿಂದ ಸುಮಾರು 11 ಮಂದಿ ಇಂಜಿನಿಯರ್ ಗಳನ್ನು ಅಮಾನತು ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೇಫ್ ಸಿಟಿ ಪ್ರಾಜೆಕ್ಟ್ ಬಗ್ಗೆ ಮಾಹಿತಿ ಪಡೆಯಲಿರುವ ಮಿನಿಸ್ಟರ್