Select Your Language

Notifications

webdunia
webdunia
webdunia
webdunia

ಆಡಳಿತ ನಡೆಸುವ ನೈತಿಕತೆ ಬಿಜೆಪಿಗೆ ಇಲ್ಲ

ಆಡಳಿತ ನಡೆಸುವ ನೈತಿಕತೆ ಬಿಜೆಪಿಗೆ ಇಲ್ಲ
bangalore , ಸೋಮವಾರ, 24 ಜುಲೈ 2023 (18:31 IST)
ಕೊಟ್ಟ ಮಾತಿನಂತೆ ನಡೆಯುವ ಪಕ್ಷ ಕಾಂಗ್ರೆಸ್, ನಮ್ಮ ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ಅಧಿಕಾರಕ್ಕೆ ಬಂದ ಕೂಡಲೇ ಗ್ಯಾರಂಟಿಗಳನ್ನು ಈಡೇರಿಸಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಜನಪರ ಆಡಳಿತ ನಡೆಸುವ ಕಾರ್ಯ ಕಾಂಗ್ರೆಸ್‌ ಮಾಡಿದೆ.ಬಿಜೆಪಿ ಶುದ್ದ ಸುಳ್ಳಿನ ಪಕ್ಷವಾಗಿದೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಸುಳ್ಳಿನ ಕಂತೆ ಕಟ್ಟಿದೆ. ಜನರ ಆಶಿರ್ವಾದದಿಂದ ಇಂದು ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ. ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಆಗದೇ ಇರುವುದು ಬಿಜೆಪಿಯ ಬಂಡತನವಾಗಿದೆ. ಇಂಡಿಯಾ ಒಕ್ಕೂಟ ರಚನೆಯಿಂದ ಮೋದಿ ಅಂಡ್ ಬಿಜೆಪಿ ಟೀಂಗೆ ದಿಗ್ರ್ಬಂತರಾಗಿದ್ದಾರೆ.. 24 ಪಕ್ಷಗಳ ಒಕ್ಕೂಟ ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರುವುದು ಗ್ಯಾರಂಟಿಯಾಗಿದೆ. 65 ವರ್ಷಗಳ ಆಡಳಿತ ಅವಧಿಯಲ್ಲಿ ಮಾಡದಷ್ಟು ಸಾಲ. 8 ವರ್ಷದ ಅವಧಿಯಲ್ಲಿ ನರೇಂದ್ರ ಮೋದಿಯವರು ದುಪ್ಪಟ್ಟು ಸಾಲ ಮಾಡಿದ್ದಾರೆ.. ಆಡಳಿತ ನಡೆಸುವ ನೈತಿಕತೆ ಬಿಜೆಪಿಗೆ ಇಲ್ಲ ಎಂದು ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಸದಸ್ಯತ್ವದಿಂದ ವಜಾ ಮಾಡುವಂತೆ ಆಗ್ರಹ