Select Your Language

Notifications

webdunia
webdunia
webdunia
webdunia

ಗಂಧದಗುಡಿ ಕುರಿತು ಅಶ್ವಿನಿ ಮನದಾಳ

ಗಂಧದಗುಡಿ ಕುರಿತು ಅಶ್ವಿನಿ ಮನದಾಳ
bangalore , ಗುರುವಾರ, 27 ಅಕ್ಟೋಬರ್ 2022 (17:04 IST)
ಸಂದರ್ಶನವೊಂದದಲ್ಲಿ ನಟ ಪುನೀತ್​​​ ರಾಜ್​​ಕುಮಾರ್​ ಅವರ ಪತ್ನಿ ಅಶ್ವಿನಿ ಪುನೀತ್​​​ ರಾಜ್​​​ಕುಮಾರ್​​​​ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಜೊತೆ ಗಂಧದಗುಡಿ ಚಿತ್ರೀಕರಣದ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ. ‘ಗಂಧದಗುಡಿ’ ‘ಪುನೀತ ಪರ್ವ’ದ ಬಗ್ಗೆ ಮಾತನಾಡಿದ ಅವರು ಥಿಯೇಟರ್​ಗೆ ಬಂದು ಚಿತ್ರ ನೋಡಿ ಎಂದು ಮನವಿ ಮಾಡಿದ್ದಾರೆ. ಈ ಮೂಲಕ ಅಪ್ಪು ಪತ್ನಿ ಅಶ್ವಿನಿ ಗಂಧದಗುಡಿ ಬಗ್ಗೆ ತಮ್ಮ ಮನದಾಳದ ಮಾತನ್ನ ಹಂಚಿಕೊಂಡಿದ್ದಾರೆ, ‘ಪುನೀತ ಪರ್ವ’ ಮಾಡಿದ್ದೇ ಅಭಿಮಾನಿಗಳಿಗಾಗಿ.. ‘ಪುನೀತ ಪರ್ವ’ ಸಂತೋಷ ಮತ್ತು ತೃಪ್ತಿ ನೀಡಿದೆ. ಅಭಿಮಾನಿಗಳಿಗೆ ನಮ್ಮ ಕುಟುಂಬ ಚಿರಋಣಿಯಾಗಿದೆ. ಎಲ್ಲರ ಬೆಂಬಲದಿಂದ ಕಾರ್ಯಕ್ರಮ ಚೆನ್ನಾಗಿ ಆಗಿದೆ. ಈ ಗಂಧದಗುಡಿಯಲ್ಲಿ ಜರ್ನಿನೆ ಸಿನಿಮಾವಾಗಿ ಮೂಡಿಬಂದಿದೆ. ನಾನು ಅಪ್ಪು ಟೀಂ ಜೊತೆ ಟ್ರಕ್ಕಿಂಗ್​ ಮಾಡಿದ್ದೆ. ಗಂಧದ ಗುಡಿ ನನಗೆ ಹೆಮ್ಮೆ ಕೊಡುವ ಪ್ರಾಜೆಕ್ಟ್ ಆಗಿತ್ತು.​ ಎಲ್ಲರೂ ಗಂಧದಗುಡಿ ನೋಡಿ, ಆಶೀರ್ವದಿಸಿ ಎಂದು ಅಶ್ವಿನಿ ಪುನೀತ್ ರಾಜ್​ಕುಮಾರ್ ಮನವಿ ಮಾಡಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಹೊಂಬಾಳೆ ಫಿಲಂಸ್ ವಿರುದ್ಧ ಅಪ್ಪು ಅಭಿಮಾನಿಗಳ ಆಕ್ರೋಶ