Select Your Language

Notifications

webdunia
webdunia
webdunia
Sunday, 13 April 2025
webdunia

ತೆಲುಗಿಗೆ ಹೊರಟ ಪಂಚತಂತ್ರ, ತೆಲುಗು ನಿರ್ಮಾಪಕರಿಗೆ ಭಟ್ಟರ ಸಿನಿಮಾ ಇಷ್ಟವಾಗಿದ್ದು ಇದೇ ಕಾರಣಕ್ಕೆ!

ಯೋಗರಾಜ್ ಭಟ್
ಬೆಂಗಳೂರು , ಭಾನುವಾರ, 31 ಮಾರ್ಚ್ 2019 (09:14 IST)
ಬೆಂಗಳೂರು: ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಮೊನ್ನೆಯಷ್ಟೇ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಇದೀಗ ಬಂದಿರುವ ಸುದ್ದಿಯೆಂದರೆ ಈ ಸಿನಿಮಾ ಈಗ ತೆಲುಗಿನಲ್ಲಿ ರಿಮೇಕ್ ಆಗಲಿದೆ.


ಹೌದು. ಭಟ್ಟರ ಸಿನಿಮಾವೊಂದು ತೆಲುಗಿಗೆ ರಿಮೇಕ್ ಆಗುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಮುಂಗಾರು ಮಳೆ ಸಿನಿಮಾವೂ ತೆಲುಗಿನಲ್ಲಿ ರಿಮೇಕ್ ಆಗಿತ್ತು. ಆದರೆ ಅದು ಅಲ್ಲಿ ಅಷ್ಟು ಕ್ಲಿಕ್ ಆಗಲಿಲ್ಲ.

ಇದೀಗ ಪಂಚತಂತ್ರ ಸಿನಿಮಾದ ಕಾರ್ ರೇಸ್ ಸೀನ್ ನೋಡಿ ತೆಲುಗಿನ ಕೆಲವು ನಿರ್ಮಾಪಕರಿಗೆ ಭಾರೀ ಇಷ್ಟವಾಗಿದೆಯಂತೆ. ಭಾಷೆ ಬರದೇ ಇದ್ದರೂ ಕ್ಲೈಮ್ಯಾಕ್ಸ್ ನಲ್ಲಿ ಬರುವ ರೇಸಿಂಗ್ ಸೀನ್ ನೋಡಿ ತೆಲುಗಿಗೆ ರಿಮೇಕ್ ಮಾಡಲು ಅಲ್ಲಿನ ನಿರ್ಮಾಪಕರು ಮುಂದೆ ಬಂದಿದ್ದಾರಂತೆ. ಉಳಿದ ಡೀಟೈಲ್ಸ್ ಸದ್ಯದಲ್ಲೇ ಗೊತ್ತಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಭಾಸ್ ಸಿಕ್ಸ್ ಪ್ಯಾಕ್ ಗೆ ಸದ್ಯದಲ್ಲೇ ಮುಕ್ತಿ?! ಬಾಹುಬಲಿ ಸ್ಟಾರ್ ನ ಹೊಸ ಲುಕ್