Publish Date: Sun, 01 May 2022 (11:11 IST)
Updated Date: Sun, 01 May 2022 (11:13 IST)
ಬೆಂಗಳೂರು: ಕೆಜಿಎಫ್ 2 ಸಿನಿಮಾ ಬಳಿಕ ನ್ಯಾಷನಲ್ ಸ್ಟಾರ್ ಆಗಿರುವ ರಾಕಿಂಗ್ ಸ್ಟಾರ್ ಯಶ್ ಗೆ ಜಾಹೀರಾತುದಾರರು ಮುತ್ತಿಕೊಳ್ಳುತ್ತಿದ್ದಾರೆ. ಅದೇ ರೀತಿ ಪ್ರಮುಖ ಪಾನ್ ಮಸಾಲಾ ಕಂಪನಿಯೊಂದು ಯಶ್ ರನ್ನು ಬ್ರಾಂಡ್ ಅಂಬಾಸಿಡರ್ ಆಗುವಂತೆ ಕೇಳಿಕೊಂಡಿತ್ತು.
ಆದರೆ ಭಾರೀ ಮೊತ್ತದ ಆಮಿಷವೊಡ್ಡಿದರೂ ಯಶ್ ಇಂತಹ ಜಾಹೀರಾತಿನಲ್ಲಿ ನಟಿಸಲು ಒಲ್ಲೆ ಎಂದಿದ್ದಾರಂತೆ. ಈ ವಿಚಾರಕ್ಕೆ ನೆಟ್ಟಿಗರು ಅವರನ್ನು ಹೊಗಳಿದ್ದಾರೆ. ಇಂತಹ ಉತ್ಪನ್ನಗಳು ಆರೋಗ್ಯಕ್ಕೆ ಹಾನಿಕರ. ನನ್ನನ್ನು ನೋಡಿ ಬೇರೆಯವರು ಇಂತಹ ಚಟಗಳ ದಾಸರಾಗುವುದು ಬೇಡ ಎಂದು ಯಶ್ ಈ ತೀರ್ಮಾನಕ್ಕೆ ಬಂದಿದ್ದಾರಂತೆ.
ಮೊನ್ನೆಯಷ್ಟೇ ನಟ ಅಕ್ಷಯ್ ಕುಮಾರ್ ಪಾನ್ ಮಸಾಲಾ ಜಾಹೀರಾತಿಗೆ ಒಪ್ಪಂದ ಮಾಡಿಕೊಂಡು ನೆಟ್ಟಿಗರಿಂದ ಟೀಕೆ ಕೇಳಿಬಂದ ನಂತರ ಹಿಂದೆ ಸರಿದಿದ್ದರು.