Select Your Language

Notifications

webdunia
webdunia
webdunia
webdunia

ಮೃತ ಅಭಿಮಾನಿಗಳ ಕುಟಂಬಕ್ಕೆ ನಟ ಯಶ್ 5 ಲಕ್ಷ ರೂ. ನೆರವು

Yash

Krishnaveni K

ಬೆಂಗಳೂರು , ಬುಧವಾರ, 17 ಜನವರಿ 2024 (14:00 IST)
ಬೆಂಗಳೂರು: ಇತ್ತೀಚೆಗಷ್ಟೇ ಮೃತಪಟ್ಟ ತಮ್ಮ ಅಭಿಮಾನಿಗಳ ಕುಟುಂಬಕ್ಕೆ ನಟ ಯಶ್ ತಲಾ 5 ಲಕ್ಷ ರೂ. ಪರಿಹಾರ ಧನ ನೀಡಿದ್ದಾರೆ.

ಯಶ್ ಹುಟ್ಟಹಬ್ಬದಂದು ಅವರ ಕಟೌಟ್ ಕಟ್ಟುವಾಗ ವಿದ್ಯುತ್ ಪ್ರವಹಿಸಿ ಇಬ್ಬರು ಅಭಿಮಾನಿಗಳು ಸಾವನ್ನಪ್ಪಿದ್ದರು. 20 ರ ಹರೆಯದ ಮನೆ ಮಕ್ಕಳನ್ನು ಕಳೆದುಕೊಂಡು ಅವರ ಕುಟುಂಬ ಅನಾಥವಾಗಿತ್ತು.

ಅಭಿಮಾನಿಗಳು ಮೃತಪಟ್ಟ ಸುದ್ದಿ ಕೇಳಿ ಯಶ್ ವಿದೇಶದಿಂದ ನೇರವಾಗಿ ಗದಗದಲ್ಲಿರುವ ಅಭಿಮಾನಿಗಳ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಅಲ್ಲದೆ, ಯಾರೂ ಈ ರೀತಿ ಮಾಡಬೇಡಿ. ನಿಮ್ಮ ಅಭಿಮಾನವನ್ನು ಈ ರೀತಿ ತೋರಿಸಲು ಹೋಗಿ ಕುಟುಂಬವನ್ನು ಅನಾಥ ಮಾಡಬೇಡಿ ಎಂದು ಮನವಿ ಮಾಡಿದ್ದರು.

ಆ ಸಂದರ್ಭದಲ್ಲಿಯೇ ಯಶ್ ನನ್ನ ಕೈಲಾದ ನೆರವು ನೀಡುವುದಾಗಿ ಕುಟುಂಬದವರಿಗೆ ಭರವಸೆ ನೀಡಿದ್ದರು. ಇದೀಗ ಆ ಭರವಸೆಯನ್ನು ಯಶ್ ಉಳಿಸಿಕೊಂಡಿದ್ದಾರೆ. ತಮ್ಮ ಸ್ನೇಹಿತರ ಮೂಲಕ ಮೃತ ಅಭಿಮಾನಿಗಳ ಮನೆಗೆ ತೆರಳಿ 5 ಲಕ್ಷ ರೂ.ಗಳ ಚೆಕ್ ಹಸ್ತಾಂತರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗತ್ತು ತೋರಿಸಿದ್ದಕ್ಕೆ ಟ್ರೋಲ್ ಆದ ಜಯಾ ಬಚ್ಚನ್