Select Your Language

Notifications

webdunia
webdunia
webdunia
webdunia

ಮೃತಪಟ್ಟ ಫ್ಯಾನ್ಸ್ ಕುಟುಂಬದಿಂದ ಯಶ್ ಗೆ ಬೇಡಿಕೆ

Yash

Krishnaveni K

ಬೆಂಗಳೂರು , ಸೋಮವಾರ, 8 ಜನವರಿ 2024 (13:17 IST)
ಬೆಂಗಳೂರು: ಯಶ್  ಹುಟ್ಟುಹಬ್ಬಕ್ಕೆ ಬ್ಯಾನರ್ ಕಟ್ಟಲು ಹೋಗಿ ಮೂವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಕುಟುಂಬಸ್ಥರು ಹೊಸ ಬೇಡಿಕೆಯಿಟ್ಟಿದ್ದಾರೆ.

ಗದಗ ಜಿಲ್ಲೆಯ ಮೂವರು ಯುವಕರು ನೀಲಗಿರಿ ತೋಪಿಗೆ ಯಶ್ ಬ್ಯಾನರ್ ಕಟ್ಟುವಾಗ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದರು. ಅವರ ಕುಟುಂಬಸ್ಥರು ಈಗ ಯಶ್ ಭೇಟಿ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ.

ಮೃತಪಟ್ಟ ಯುವಕರ ಗ್ರಾಮಕ್ಕೆ ಯಶ್ ಭೇಟಿ ನೀಡಬೇಕು, ಕುಟುಂಬಸ್ಥರಿಗೆ ಸಾಂತ್ವನ ಹೇಳಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಆದರೆ ಸದ್ಯಕ್ಕೆ ಯಶ್ ಟಾಕ್ಸಿಕ್ ಶೂಟಿಂಗ್ ನಿಮಿತ್ತ ವಿದೇಶದಲ್ಲಿದ್ದಾರೆ. ಹೀಗಾಗಿ ಈಗಲೇ ಇಲ್ಲಿಗೆ ಭೇಟಿ ನೀಡುವುದಂತೂ ಅಸಾಧ‍್ಯ.

ಆದರೆ ಭಾರತಕ್ಕೆ ಬಂದ ಮೇಲೆ ಅಭಿಮಾನಿಗಳ ಕುಟುಂಬಸ್ಥರನ್ನು ಭೇಟಿಯಾಗುತ್ತಾರೋ ಅಥವಾ ಫೋನ್ ಮೂಲಕ ಮಾತನಾಡಿ ಸಾಂತ್ವನ ಹೇಳುತ್ತಾರೋ ಕಾದು ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಲಿವುಡ್ ರೇಂಜ್ ನಲ್ಲಿದೆ ಯುಐ ಸಿನಿಮಾ ಟೀಸರ್: ಲಿಂಕ್ ಇಲ್ಲಿದೆ ನೋಡಿ