Webdunia - Bharat's app for daily news and videos

Install App

ಎಷ್ಟು ಹಿಟ್ ಕೊಟ್ರೂ ಕನ್ನಡ ಸಿನಿಮಾ ಬಗ್ಗೆ ಅಸಡ್ಡೆ ಯಾಕೆ? ನಿರ್ಮಾಪಕ ಕಾರ್ತಿಕ್ ಗೌಡ ತಿರುಗೇಟು

Webdunia
ಸೋಮವಾರ, 15 ಆಗಸ್ಟ್ 2022 (08:10 IST)
ಬೆಂಗಳೂರು: ಕನ್ನಡ ಸಿನಿಮಾಗಳೆಂದರೆ ಇತರ ಸಿನಿಮಾ ಮಂದಿಗೆ ಒಂಥರಾ ಅಸಡ್ಡೆ. ಕೆಜಿಎಫ್ ಸಿನಿಮಾ ಬಂದ ಮೇಲೆ ಕನ್ನಡ ಸಿನಿಮಾಗಳನ್ನು ನೋಡುವ ದೃಷ್ಟಿಕೋನ ಬದಲಾಗಿದೆ.

ಹಾಗಿದ್ದರೂ ಕೆಲವರು ಇನ್ನೂ ಕನ್ನಡ ಸಿನಿಮಾಗಳೆಂದರೆ ಅವಗಣನೆ ಮಾಡುವವರಿದ್ದಾರೆ. ಅದೇ ರೀತಿ ಮಾಡಿದ ಸಿನಿಮಾ ವಿಮರ್ಶಕ ಶ್ರೀಧರ್ ಪಿಳ್ಳೈಗೆ ಕನ್ನಡ ನಿರ್ಮಾಪಕ ಕಾರ್ತಿಕ್ ಗೌಡ ತಿರುಗೇಟು ಕೊಟ್ಟಿದ್ದಾರೆ.

ಲಾಲ್ ಸಿಂಗ್ ಛಡ್ಡಾ ಫ್ಲಾಪ್ ಆಗಿದ್ದನ್ನು ಉಲ್ಲೇಖಿಸಿ ಶ್ರೀಧರ್ ಪಿಳ್ಳೈ ನೋಡಿ ಇದೇ ದಿನ ಬಿಡುಗಡೆಯಾದ ಇತರ ದಕ್ಷಿಣದ ಸಿನಿಮಾಗಳು ಮೊದಲ ದಿನ ಉತ್ತಮ ಗಳಿಕೆ ಮಾಡಿವೆ ಎಂದು ತಮಿಳು, ತೆಲುಗು ಸಿನಿಮಾಗಳ ಪಟ್ಟಿ ನೀಡಿದ್ದರು. ಆದರೆ ಇದೇ ದಿನ ಬಿಡುಗಡೆಯಾದ ಕನ್ನಡ ಸಿನಿಮಾ ಗಾಳಿಪಟ 2  ಮೊದಲ ದಿನವೇ ಭರ್ಜರಿ ಗಳಿಕೆ ಮಾಡಿದ್ದರೂ ಹೆಸರೇ ಉಲ್ಲೇಖಿಸಿಲ್ಲ.

ಹೀಗಾಗಿ ಕಾರ್ತಿಕ್ ಗೌಡ ಶ್ರೀಧರ್ ಪಿಳ್ಳೈ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದು, ಗಾಳಿಪಟ 2 ಎಂಬ ಕನ್ನಡ ಸಿನಿಮಾವೂ ಇದೇ ದಿನ ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿದೆ. ನೀವು ಕನ್ನಡ ಸಿನಿಮಾವನ್ನು ಯಾಕೆ ಇತರ ಭಾಷೆಗಳ ಜೊತೆ ನೋಡಲ್ಲ? ದಕ್ಷಿಣದ ಸಿನಿಮಾಗಳ ಜೊತೆ ಕನ್ನಡ ಚಿತ್ರರಂಗವನ್ನೂ ಒಂದೇ ರೀತಿ ನೋಡಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿದೇಶಿ ಹುಡುಗನ ಜತೆ ಅರ್ಜುನ್ ಸರ್ಜಾ ಎರಡನೇ ಪುತ್ರಿ ನಿಶ್ಚಿತಾರ್ಥ, ಹುಡುಗ ಯಾರು

ದಾಂಪತ್ಯಕ್ಕೆ 5 ವರ್ಷದ ಸಂಭ್ರಮ: ಪತ್ನಿ ರೇವತಿಗೆ ವಿಶೇಷವಾಗಿ ಶುಭಕೋರಿದ ನಿಖಿಲ್ ಕುಮಾರಸ್ವಾಮಿ

ಮಚ್ಚು ರೀಲ್ಸ್ ಪ್ರಕರಣ: 14 ದಿನ ಜೈಲು ಸೇರಬೇಕಿದ್ದ ರಜತ್ ಕಿಶನ್‌ಗೆ ಸಿಕ್ತು ಬಿಡುಗಡೆ ಭಾಗ್ಯ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಅಭಿನಯ, ಹುಡುಗು ಯಾರು ಗೊತ್ತಾ

ಮೌನವಾಗಿದ್ದ ನಟಿ ನಜ್ರೀಯಾ ಫಹಾದ್‌ ಶಾಕಿಂಗ್ ಪೋಸ್ಟ್, ಈ ಸುದ್ದಿಯನ್ನು ಕೇಳಲೂ ನಾವು ತಯಾರಿಲ್ಲ ಎಂದಾ ಫ್ಯಾನ್ಸ್‌

ಮುಂದಿನ ಸುದ್ದಿ
Show comments