Select Your Language

Notifications

webdunia
webdunia
webdunia
webdunia

ನಿಧಿ ಸುಬ್ಬಯ್ಯರವರ ಈ ಫೋಟೋ ಚರ್ಚೆಗೆ ಕಾರಣವಾಗಿದ್ದಾದರೂ ಯಾಕೆ?

ನಿಧಿ ಸುಬ್ಬಯ್ಯರವರ  ಈ ಫೋಟೋ ಚರ್ಚೆಗೆ ಕಾರಣವಾಗಿದ್ದಾದರೂ ಯಾಕೆ?
ಮೈಸೂರು , ಭಾನುವಾರ, 5 ಆಗಸ್ಟ್ 2018 (06:55 IST)
ಮೈಸೂರು : ನಟಿ ನಿಧಿ ಸುಬ್ಬಯ್ಯ ಮೈಸೂರು ಅರಮನೆಯ ದರ್ಬಾರ್ ಹಾಲ್ ನಲ್ಲಿ ತೆಗೆಸಿಕೊಂಡಿರುವ ಫೋಟೋಗಳು ಇದೀಗ ಬಾರೀ ಚರ್ಚೆಗೆ ಕಾರಣವಾಗಿದೆ.


ಹೌದು.  ಮೈಸೂರು ಅರಮನೆಯ ಕೆಲವು ಕಡೆ ಫೋಟೋ ತೆಗೆಯಲು ನಿಷೇಧ ಹೇರಲಾಗಿದೆ. ಆದರೆ ನಟಿ ನಿಧಿ ಸುಬ್ಬಯ್ಯ ಇತ್ತೀಚಿಗೆ ಮೈಸೂರು ಅರಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅರಮನೆಯ ದರ್ಬಾರ್ ಹಾಲ್ ನಲ್ಲಿ ಕುಳಿತು  ಫೋಟೋಗಳನ್ನು ತೆಗೆಸಿಕೊಂಡಿದ್ದು, ಅದನ್ನು ಇನ್ಸ್ಟಗ್ರಾಂನಲ್ಲಿ ಅಪ್ ಲೋಡ್ ಮಾಡಿದ್ದಾರೆ.


ಇದು ಈಗ ಬಾರೀ ಚರ್ಚೆಗೆ ಕಾರಣವಾಗಿದ್ದು, ದರ್ಬಾರ್ ಹಾಲ್  ಫೋಟೋ ತೆಗೆಯಲು ನಿಷೇದಿತ ಪ್ರದೇಶವೇ ? ಅಲ್ಲವೇ? ಎಂಬ ಗೊಂದಲ ಹಲವರಲ್ಲಿ ಮೂಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅರಮನೆಯ ಭದ್ರತೆಯ ಎಸಿಪಿ ಶೈಲೇಂದ್ರ, “ಈ ಪ್ರದೇಶದಲ್ಲಿ ಫೋಟೋಗೆ ನಿಷೇದವಿಲ್ಲ. ಆದರೆ ನವರಾತ್ರಿ ಸಂದರ್ಭದಲ್ಲಿ ಚಿನ್ನದ ಸಿಂಹಾಸನ ಹಾಗೂ ಚಿನ್ನದ ಅಂಬಾರಿ ಇಡುವ ಕೆಲವು ಪ್ರದೇಶಗಳಲ್ಲಿ ಮಾತ್ರ ಪೋಟೋ ತೆಗೆಯುವಂತಿಲ್ಲ “ ಎಂದು ಸ್ಪಷ್ಟನೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀತಿಸಿ ಮದುವೆಯಾದವನಿಗೆ ಫಸ್ಟ್ ನೈಟ್ ದಿನ ತಿಳಿಯಿತು ಬೆಚ್ಚಿ ಬೀಳಿಸುವ ರಹಸ್ಯ