Select Your Language

Notifications

webdunia
webdunia
webdunia
webdunia

ಮುಂಬೈ ಬೀದಿಗಳಲ್ಲಿ ನಟ ಸುಶಾಂತ್ ಸಿಂಗ್ ಹೋರ್ಡಿಂಗ್ ಯಾಕೆ?

ಮುಂಬೈ ಬೀದಿಗಳಲ್ಲಿ ನಟ ಸುಶಾಂತ್ ಸಿಂಗ್  ಹೋರ್ಡಿಂಗ್ ಯಾಕೆ?
ಮುಂಬೈ , ಶುಕ್ರವಾರ, 2 ಅಕ್ಟೋಬರ್ 2020 (22:40 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ ತನಿಖೆಯನ್ನು ಸಿಬಿಐ ನಡೆಸುತ್ತಿದೆ.

ಈ ನಡುವೆ ನಟ ಸುಶಾಂತ್ ಅವರ ಅಭಿಮಾನಿಗಳು ನಟನ ಸಾವಿಗೆ ನ್ಯಾಯ ಕೋರಿ ಮುಂಬೈ ಬೀದಿಗಳಲ್ಲಿ ಹೋರ್ಡಿಂಗ್ ಹಾಕಿದ್ದಾರೆ.

ಮುಂಬೈ ಬೀದಿಗಳಲ್ಲಿ ಹಾಕಲಾಗಿರುವ ಹೋರ್ಡಿಂಗ್ ಗಳ ಫೋಟೊಗಳನ್ನು ನಟನ ಸಹೋದರಿ ಶ್ವೇತಾ  ಸಿಂಗ್ ಕೀರ್ತಿ ಶೇರ್ ಮಾಡಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯವಾಗಿರುವ ಸುಶಾಂತ್ ಸಿಂಗ್ ರಜಪೂತ್ ಅವರ ಯುಎಸ್ ಮೂಲದ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಅವರು ತಮ್ಮ ಟ್ವಿಟ್ಟರ್ ನಲ್ಲಿ ಮುಂಬೈನಲ್ಲಿ ಇರಿಸಲಾಗಿರುವ ಹೋರ್ಡಿಂಗ್ ಗಳನ್ನು ತಮ್ಮ ಸಹೋದರರಿಗಾಗಿ ಹಂಚಿಕೊಂಡಿದ್ದಾರೆ. ದಿವಂಗತ ನಟನ ಅಭಿಮಾನಿಗಳು ಅವರಿಗೆ ನ್ಯಾಯ ಕೋರಿ ಮುಂಬೈನಾದ್ಯಂತ ಹೋರ್ಡಿಂಗ್‌ಗಳನ್ನು ಹಾಕಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ನಟ ಸುಶಾಂತ ಸಿಂಗ್ ಕೇಸಿಗೆ ಟ್ವಿಸ್ಟ್ : ಉಪವಾಸ ಸತ್ಯಾಗ್ರಹ ಶುರು