Select Your Language

Notifications

webdunia
webdunia
webdunia
webdunia

ನಟ ಸುಶಾಂತ ಸಿಂಗ್ ಕೇಸಿಗೆ ಟ್ವಿಸ್ಟ್ : ಉಪವಾಸ ಸತ್ಯಾಗ್ರಹ ಶುರು

ನಟ ಸುಶಾಂತ ಸಿಂಗ್ ಕೇಸಿಗೆ ಟ್ವಿಸ್ಟ್ : ಉಪವಾಸ ಸತ್ಯಾಗ್ರಹ ಶುರು
ನವದೆಹಲಿ , ಶುಕ್ರವಾರ, 2 ಅಕ್ಟೋಬರ್ 2020 (22:36 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ನ್ಯಾಯ ಕೋರಿ ಅಭಿಮಾನಿಗಳು ಉಪವಾಸ ಸತ್ಯಾಗ್ರಹದ ದಾರಿ ತುಳಿದಿದ್ದಾರೆ.

ನಟನ ಸ್ನೇಹಿತ ಗಣೇಶ್ ಹಿವಾರ್ಕರ್ ಮತ್ತು ಮಾಜಿ ವ್ಯವಸ್ಥಾಪಕ ಅಂಕಿತ್ ಆಚಾರ್ಯ ಅವರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ದೆಹಲಿಯ ಜಂತರ್ ಮಂತರ್ ನಲ್ಲಿ ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆಯಂದು, ಸುಷಾಂತ್ ಅವರ ಅಭಿಮಾನಿಗಳು ನಟನ ಸಾವಿಗೆ ನ್ಯಾಯವನ್ನು ಕೋರಿ ಪ್ರತಿಭಟನೆಯನ್ನು ಆಯೋಜಿಸಿದ್ದಾರೆ.

ಸಿಬಿಐ ಈ ಪ್ರಕರಣವನ್ನು 302 (ಕೊಲೆ ಆರೋಪ) ಅಡಿಯಲ್ಲಿ ತನಿಖೆ ಮಾಡಬೇಕು ಮತ್ತು ಅವರು ಅದನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸಬಾರದು ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಪಾರ್ಟಿ ವಿಡಿಯೋ ಕರಣ್ ಜೋಹರ್ ಗೆ ಕುತ್ತು ತರುತ್ತಾ?