Select Your Language

Notifications

webdunia
webdunia
webdunia
webdunia

ನಟ ಪ್ರಕಾಶ್ ರೈ ರನ್ನು ತರಾಟೆಗೆ ತೆಗೆದುಕೊಂಡ ನಿರ್ದೇಶಕ ವಿನಯ್ ಕೃಷ್ಣ. ಕಾರಣವೇನು ಗೊತ್ತಾ…?

ನಟ ಪ್ರಕಾಶ್ ರೈ ರನ್ನು ತರಾಟೆಗೆ ತೆಗೆದುಕೊಂಡ ನಿರ್ದೇಶಕ ವಿನಯ್ ಕೃಷ್ಣ. ಕಾರಣವೇನು ಗೊತ್ತಾ…?
ಬೆಂಗಳೂರು , ಬುಧವಾರ, 11 ಏಪ್ರಿಲ್ 2018 (07:18 IST)
ಬೆಂಗಳೂರು : ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ಚಿರಂಜೀವಿ ಸರ್ಜಾ ಅವರು ಅಭಿನಯಿಸಿರುವ ‘ ಸೀಜರ್’ ಚಿತ್ರದಲ್ಲಿ ಬರುವ ಡೈಲಾಗ್ ಒಂದರ ಬಗ್ಗೆ ಇತ್ತೀಚೆಗೆ ಸಾಕಷ್ಟು ಜನರು  ವಿರೋಧ ವ್ಯಕ್ತಡಿಸಿದ್ದರು. ಆದರೆ ಈ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದ ನಟ ಪ್ರಕಾಶ್ ರೈ ಅವರು ಕೂಡ ಈ ಡೈಲಾಗ್ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಇದೀಗ ಚಿತ್ರದ ನಿರ್ದೇಶಕ ವಿನಯ ಕೃಷ್ಣ ಅವರು ಪ್ರಕಾಶ್ ರೈ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


ಈ ಚಿತ್ರದಲ್ಲಿ ರವಿಚಂದ್ರನ್‌ ಅವರು ಹೇಳುವ "ಗೋ ಹತ್ಯೆ ಮಾಡೋದು, ಹೆತ್ತ ತಾಯಿನಾ ತಲೆ ಹಿಡಿಯೋದು ಎರಡೂ ಒಂದೆ' ಎಂಬ ಸಂಭಾಷಣೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಈ ಬಗ್ಗೆ ನಟ ಪ್ರಕಾಶ್ ರೈ ಅವರು ಆ ಡೈಲಾಗ್ ತಪ್ಪಲ್ವಾ..? ನಾನ್ಸೆನ್ಸ್, ಡೈಲಾಗ್ ಬರೆದವರಿಗೆ ತಲೆ ಇಲ್ಲ. ನಾನು ಆ ದೃಶ್ಯದಲ್ಲಿ ಇಲ್ಲ, ಆದರೂ ತಕ್ಷಣ ನಿರ್ದೇಶಕರಿಗೆ ಫೋನ್ ಮಾಡಿ ಈ ಬಗ್ಗೆ ಕೇಳಿದ್ದಾಗಿ ಹೇಳಿದ್ದರು.


ಈ ವಿಷಯದ ಬಗ್ಗೆ ಮಾತನಾಡಿರುವ ನಿರ್ದೇಶಕ ವಿನಯ್ ಕೃಷ್ಣ, `ಪ್ರಕಾಶ್ ರಾಜ್‌ ಅವರು ನನಗೆ ಫೋನ್ ಮಾಡಿಲ್ಲ ಮತ್ತು ಈ ವಿಷಯವಾಗಿ ನನ್ನ ಬಳಿ ಮಾತನಾಡಿಲ್ಲ. ಮುಖ್ಯವಾಗಿ ಈ ಸಂಭಾಷಣೆಗೂ ಅವರಿಗೂ ಸಂಬಂಧವಿಲ್ಲ. ಇದು ನಟ ರವಿಚಂದ್ರನ್ ಅವರು ಹೇಳುವ ಒಂದು ಸಂಭಾಷಣೆ. ಅವರೇ ಇಲ್ಲಿಯವರೆಗೂ ಈ ಬಗ್ಗೆ ಮಾತಾಡಿಲ್ಲ. ಹೀಗಿರುವಾಗ ಪ್ರಕಾಶ್ ರಾಜ್‌ ಅವರು ಈ ಸಂಭಾಷಣೆ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ. ಇಷ್ಟಕ್ಕೂ ಈ ಸಂಭಾಷಣೆಯಲ್ಲಿ ತಪ್ಪೇನಿದೆ. ಇದು ಒಂದು ಸಂಭಾಷಣೆ ಅಷ್ಟೇ. ಈ ಸಂಭಾಷಣೆ ಇಟ್ಟುಕೊಂಡು ಇಡೀ ಚಿತ್ರದ ಬಗ್ಗೆ ತೀರ್ಮಾನ ಮಾಡೋದು ತಪ್ಪು' ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳು ನಟರ ವಿರುದ್ಧ ಹರಿಹಾಯ್ದ ಕನ್ನಡದ ಹಿರಿಯ ನಟ ಅನಂತನಾಗ್