Select Your Language

Notifications

webdunia
webdunia
webdunia
webdunia

ಊರ್ವಶಿ ಚಿತ್ರಮಂದಿರವನ್ನು ಜನರು ಮುತ್ತಿಗೆ ಹಾಕಲು ಕಾರಣವೇನು ಗೊತ್ತಾ?

ಊರ್ವಶಿ ಚಿತ್ರಮಂದಿರವನ್ನು ಜನರು ಮುತ್ತಿಗೆ ಹಾಕಲು ಕಾರಣವೇನು ಗೊತ್ತಾ?
ಬೆಂಗಳೂರು , ಭಾನುವಾರ, 10 ಜೂನ್ 2018 (13:40 IST)
ಬೆಂಗಳೂರು : ಶನಿವಾರ ಬೆಂಗಳೂರಿನ ಊರ್ವಶಿ ಚಿತ್ರಮಂದಿರವನ್ನು ಜನರು ಆಕ್ರೋಶದಿಂದ ಮುತ್ತಿಗೆ ಹಾಕಿದ ಘಟನೆಯೊಂದು ಸಂಭವಿಸಿದೆ.


ಇದಕ್ಕೆ ಕಾರಣವೆನೆಂದರೆ ಈ ಚಿತ್ರಮಂದಿರದವರು ಜ್ಯುರಾಸಿಕ್ ವರ್ಲ್ಡ್ ಟಿಕೆಟ್ ನೀಡಿ ಕಾಲಾ ಚಿತ್ರ ಪ್ರದರ್ಶನ ಮಾಡಿದ್ದಾರೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕದಲ್ಲಿ ಕಾಲಾ ಚಿತ್ರ ಪ್ರದರ್ಶನಕ್ಕೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಕಾಲಾ ಚಿತ್ರ ಪ್ರದರ್ಶನವನ್ನು ರದ್ದುಗೊಳಿಸಿದ ಊರ್ವಶಿ ಚಿತ್ರಮಂದಿರ  ಜ್ಯುರಾಸಿಕ್   ವರ್ಲ್ಡ್  ಸಿನಿಮಾವನ್ನು ಹಾಕಿತ್ತು. ಅಲ್ಲದೆ ಸಿನಿಮಾದ ಪೋಸ್ಟರ್ ಗಳನ್ನು ಕೂಡ ಥಿಯೇಟರ್ ನ ಮುಂದೆ  ಹಾಕಲಾಗಿತ್ತು.


ಸಿನಿಮಾ ವೀಕ್ಷಿಸಲು ಬಂದ ಜನರಿಗೆ ಜ್ಯುರಾಸಿಕ್ ವರ್ಲ್ಡ್ ಟಿಕೆಟ್ ನೀಡಿದ ಸಿನಿಮಾ ಮಂದಿರ ಆದರೆ ಪ್ರದರ್ಶನ ಮಾಡಿದ್ದು ಮಾತ್ರ ತಮಿಳಿನ ಕಾಲಾ ಚಿತ್ರ. ಇದರಿಂದ ಆಕ್ರೋಶಗೊಂಡ ಪ್ರೇಕ್ಷಕರು ಚಿತ್ರಮಂದಿರದ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾ ಲೋಕಕ್ಕೆ ರಮ್ಯಾ ರಿ ಎಂಟ್ರಿ!