Select Your Language

Notifications

webdunia
webdunia
webdunia
webdunia

ಯಾವ ಹೂವಿನಿಂದ ದೇವರನ್ನ ಪೂಜಿಸಿದರೆ ಏನು ಫಲ ಎಂಬುದು ತಿಳಿಬೇಕಾ?

ಯಾವ ಹೂವಿನಿಂದ ದೇವರನ್ನ ಪೂಜಿಸಿದರೆ ಏನು ಫಲ ಎಂಬುದು ತಿಳಿಬೇಕಾ?
ಬೆಂಗಳೂರು , ಶನಿವಾರ, 9 ಜೂನ್ 2018 (05:49 IST)
ಬೆಂಗಳೂರು : ದೇವರಿಗೆ ಭಕ್ತಿಯಿಂದ ಒಂದು  ಪುಷ್ಪವನ್ನು ಅರ್ಪಿಸಿದರೆ ಸಾಕು ಭಕ್ತರು ಬೇಡದಿದ್ದರೂ ವರ ನೀಡುತ್ತಾನೆ ದೇವರು ಎಂದು ಹಿರಿಯರು ಹೇಳುವುದನ್ನು ನಾವು ಕೇಳಿರುತ್ತೇವೆ. ಆದರೆ ಕೆಲವು ಹೂಗಳಿಂದ ನಮ್ಮ ಇಷ್ಟದೈವಗಳನ್ನು ಪೂಜಿಸಿದರೆ ಜೀವನದಲ್ಲಿ ಎದುರಾಗುವ ಸಮಸ್ಯೆಗಳು ದೂರವಾಗುತ್ತದೆಯಂತೆ. ಆ ಹೂಗಳು ಯಾವುವು, ಅವುಗಳಿಂದ ಪೂಜಿಸಿದರೆ ಸಿಗುವ ಫಲವೇನು ಎಂಬುದು ಇಲ್ಲಿದೆ ನೋಡಿ.

*ಸಂಪಿಗೆ ಹೂವನ್ನು ಸಮರ್ಪಿಸಿ ಪ್ರಸಾದ ಸ್ವೀಕರಿಸಿದರೆ ಮಾಟ ಮಂತ್ರ, ಕ್ಷುದ್ರ ವಿದ್ಯೆಗಳು ನಮ್ಮ ಮೇಲೆ ಪ್ರಭಾವ ಬೀರಲ್ಲ. ಶತ್ರು ನಿವಾರಣೆ ಸಾಧ್ಯವಾಗುತ್ತದೆಯಂತೆ.

 

*ಪಾರಿಜಾತ ಹೂಗಳಿಂದ ಅರ್ಚನೆ ಮಾಡಿದರೆ ಕಾಲ ಸರ್ಪದೋಷ ನಿವಾರಣೆಯಾಗುವುದಷ್ಟೇ ಅಲ್ಲ ಮನಶ್ಯಾಂತಿಯೂ ಲಭಿಸುತ್ತದೆಯಂತೆ.

 

*ಮಲ್ಲಿಗೆ ಹೂವುಗಳಿಂದ ಪೂಜಿಸಿದರೆ ಅಧಿಕಾರದಲ್ಲಿರುವವರ ಮನಸ್ತಾಪ ಕಡಿಮೆಯಾಗುತ್ತದೆ ಹಾಗೂ ರೋಗಗಳಿಂದ ವಿಮುಕ್ತಿ ಲಭಿಸಿ ಆರೋಗ್ಯ ಸಿದ್ಧಿಸುತ್ತದೆಯಂತೆ.

 

* ಕಮಲದ ಹೂವಿನಿಂದ ಅರ್ಚನೆ ಮಾಡಿದರೆ ದಾರಿದ್ರ್ಯ ನಿವಾರಣೆಯಾಗಿ, ಶ್ರೀಮಂತರಾಗುತ್ತಾರಂತೆ.

 

*ನೈದಿಲೆ ಹೂವಗಳಿಂದ ಪೂಜಿಸಿದರೆ ಮಂತ್ರ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತವೆಯಂತೆ.

 

*ತುಂಬೆ ಹೂವಿನಿಂದ ಶಿವನನ್ನು ಪೂಜಿಸಿದರೆ ಭಕ್ತಿ ಹೆಚ್ಚುತ್ತದೆಯಂತೆ.

 

*ನಂದಿಬಟ್ಟಲು ಹೂವಿಂದ ಶಿವನ ಪೂಜೆ ಮಾಡಿದರೆ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಸಿಗುತ್ತದೆಯಂತೆ.

 

*ಸೂರ್ಯಕಾಂತಿ ಹೂವನ್ನು ಪೂರ್ನಾಹುತಿಯಾಗಿ ಕೊಟ್ಟರೆ ಅಷ್ಟೈಶ್ವರ್ಯಗಳು ಸಿದ್ಧಿಸುತ್ತವೆ ಎನ್ನುತ್ತವೆ ಪುರಾಣಗಳು.

 

ಆದರೆ ಕನಕಾಂಬರದಿಂದ ಪೂಜೆ ಮಾಡಬಾರದು. ಆ ರೀತಿ ಮಾಡಿದರೆ ಜೀವನದಲ್ಲಿ ವೈರಾಗ್ಯ ಉಂಟಾಗುತ್ತದೆ ಎಂದು ಶಾಸ್ತ್ತಗಳು ಹೇಳುತ್ತವೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 


Share this Story:

Follow Webdunia kannada

ಮುಂದಿನ ಸುದ್ದಿ

ಗುಡುಗು ಸಿಡಿಲಿನ ಶಬ್ದ ಕೇಳಿ ನಮ್ಮ ಹಿರಿಯರು , ಫಲ್ಗುಣಾ ಎಂದು ಜಪಿಸುವುದ್ಯಾಕೆ ಗೊತ್ತಾ?