Webdunia - Bharat's app for daily news and videos

Install App

ದರ್ಶನ್ ಮ್ಯಾನೇಜರ್ ಮಲ್ಲಿನಿಂದ ಮೋಸ ಹೋದ ಮತ್ತೊಬ್ಬ ಸ್ಟಾರ್ ನಟ ಯಾರು ಗೊತ್ತಾ?

Webdunia
ಬುಧವಾರ, 25 ಜುಲೈ 2018 (06:48 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ವಂಚಿಸಿದ ಅವರ ಮ್ಯಾನೇಜರ್ ಮಲ್ಲಿಕಾರ್ಜುನ್ ಇದೀಗ ಬಹುಭಾಷಾ ನಟರೊಬ್ಬರಿಗೂ ಪಂಗನಾಮ ಹಾಕಿದ್ದಾರೆ ಎಂಬ ವಿಚಾರ ಬಹಿರಂಗವಾಗಿದೆ.


ಹೌದು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಳಿಯಲ್ಲಿ ಸಾಕಷ್ಟು ವರ್ಷಗಳಿಂದ ಮ್ಯಾನೆಜರ್ ಆಗಿ ಕೆಲಸ ಮಾಡಿಕೊಂಡು ತೂಗುದೀಪ ಪ್ರೋಡಕ್ಷನ್ಸ್ ಹಾಗೂ ವಿತರಣೆಯ ಸಂಪೂರ್ಣ ಜವಾಬ್ದಾರಿಗಳನ್ನು ನೊಡುಕೊಳ್ಳುತ್ತಿದ್ದ ಮಲ್ಲಿಕಾರ್ಜುನ್, ದರ್ಶನ್ ಹೆಸರು ಬಳಸಿಕೊಂಡು ಸಾಕಷ್ಟು ಜನರಿಗೆ ಮೋಸ ಮಾಡಿರುವ ವಿಚಾರ ಕಳೆದ ಎರಡು ವಾರಗಳ ಹಿಂದೆಯೇ ತಿಳಿದು ಬಂದಿತ್ತು. ಆದರೆ ಇದೀಗ ಬಹುಭಾಷಾ ನಟ ಅರ್ಜುನ್ ಸರ್ಜಾ ಅವರಿಗೂ ವಂಚನೆ ಮಾಡಿದ್ದಾನಂತೆ


ಅರ್ಜುನ್ ಸರ್ಜಾ ನಿರ್ದೇಶನ ಮಾಡಿದ್ದ 'ಪ್ರೇಮ ಬರಹ' ಸಿನಿಮಾವನ್ನು ತೂಗುದೀಪ ಸಂಸ್ಥೆಯ ಮೂಲಕ ವಿತರಣೆ ಮಾಡಲಾಗಿತ್ತು. ಇದರ ಉಸ್ತುವಾರಿಯನ್ನ ಮಲ್ಲಿಕಾರ್ಜುನ್ ನೋಡಿಕೊಳ್ಳುತ್ತಿದ್ದು, ಮೊದಲ ವಾರದ ಸಿನಿಮಾದ ಶೇರ್ 10 ಲಕ್ಷ ಎಂದು ಆತ ಅರ್ಜುನ್ ಸರ್ಜಾಗೆ ಲೆಕ್ಕ ಕೊಟ್ಟಿದ್ದಾನಂತೆ. ಸಂಶಯಗೊಂಡ ಅರ್ಜುನ್ ಸರ್ಜಾ ಅವರು ಎಲ್ಲ ಚಿತ್ರಮಂದಿರಕ್ಕೆ ಕರೆ ಮಾಡಿ ಕೇಳಿದಾಗ ಮೊದಲ ವಾರ 10 ಲಕ್ಷ ಅಲ್ಲ 40 ಲಕ್ಷ ಅನ್ನೊದು ಕನ್ಫರ್ಮ್ ಆಗಿದೆ. ಮಲ್ಲಿಯನ್ನು ದಬಾಯಿಸಿ ಕೇಳಿದಾಗ ಅಸಲಿ ಕಥೆ ಬಾಯಿ ಬಿಟ್ಟಿದ್ದಾನಂತೆ. ತಪ್ಪು ಒಪ್ಪಿಕೊಂಡ ಮಲ್ಲಿ ಒಂದು ಕೋಟಿಯ ಚೆಕ್ ಕೊಟ್ಟು ದರ್ಶನ್ ಅವರಿಗೆ ಈ ವಿಚಾರವನ್ನು ತಿಳಿಸದಂತೆ ಕೈ ಮುಗಿದಿದ್ದಾನೆ ಎಂದು ತಿಳಿದುಬಂದಿದೆ. ಆದರೆ ಆ ಒಂದು ಕೋಟಿಯ ಚೆಕ್ ಬೌನ್ಸ್ ಆಗ್ತಿದಂತೆ ಆತ ಪರಾರಿಯಾಗಿದ್ದಾನೆ ಎಂದು ಅರ್ಜುನ್ ಸರ್ಜಾ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Madenur Manu: ಮಡೆನೂರು ಮನು ರೇಪ್ ಕೇಸ್: ಒಂದೇ ದಿನಕ್ಕೆ ಉಲ್ಟಾ ಹೊಡೆದ ಸಂತ್ರಸ್ತೆ ಹೇಳಿದ್ದೇನು

Darshan: ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿ ವಿರುದ್ಧ ದೂರು: ಫಾರಂಹೌಸ್ ಮೇಲೆ ರೇಡ್

Chaitra Kundapura: ತಂದೆಯ ಹತ್ಯೆಗೆ ಚೈತ್ರಾ ಕುಂದಾಪುರ ಸುಪಾರಿ: ಇದೇನಿದು ಆರೋಪ

Tamannah Bhatia: ಮೈಸೂರ್ ಸ್ಯಾಂಡಲ್ ಗೆ ತಮನ್ನಾ ಭಾಟಿಯಾ: ಕನ್ನಡ ನಟಿಯರು ಸಿಗ್ಲಿಲ್ವಾ

ಅಬ್ಬಬ್ಬಾ, ಮಗಳ ದಿಟ್ಟ ನಿರ್ಧಾರ ಕೇಳಿ ಶಾಕ್ ಆದ ಬಾಲಿವುಡ್ ನಟ, ಆಥಿಯಾ ಶೆಟ್ಟಿ ಬಗ್ಗೆ ಸುನೀಲ್ ಮೆಚ್ಚುಗೆಯ ಮಾತು

ಮುಂದಿನ ಸುದ್ದಿ
Show comments