Select Your Language

Notifications

webdunia
webdunia
webdunia
webdunia

ಅಪಘಾತದಲ್ಲಿ ಕಿರಣ್‌ಗೆ ಏನಾಯ್ತು, ಆಸ್ಪತ್ರೆಯಿಂದಲೇ ಕೊಟ್ಟ ಅಪ್‌ಡೇಟ್‌ ಏನು

Actor Kiran Raj

Sampriya

ಬೆಂಗಳೂರು , ಬುಧವಾರ, 11 ಸೆಪ್ಟಂಬರ್ 2024 (14:16 IST)
Photo Courtesy X
ಬೆಂಗಳೂರು: ನಟ ಕಿರಣ್​ ರಾಜ್​ ಅವರು ಪ್ರಯಾಣಿಸುತ್ತಿದ್ದ ಕಾರು ಮಂಗಳವಾರ ತಡರಾತ್ರಿ 9 ಗಂಟೆ ಸುಮಾರಿಗೆ ಅಪಘಾತಕ್ಕೆ ಒಳಗಾಗಿದೆ. ಅದರಲ್ಲಿದ್ದ ಕಿರಣ್​ ರಾಜ್​ ಅವರ ಎದೆಯ ಭಾಗಕ್ಕೆ ಗಂಭೀರವಾಗಿ ಪೆಟ್ಟಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನಟನ ಆರೋಗ್ಯದ ಕುರಿತು ಆಸ್ಪತ್ರೆಯಿಂದ ಅಪ್‌ಡೇಟ್‌ ಬಂದಿದೆ. ಕಿರಣ್ ರಾಜ್ ಅವರ ವಿಡಿಯೋ ರಿಲೀಸ್‌ ಆಗಿದೆ. ಈ ವಿಡಿಯೋದಲ್ಲಿ ನಟ ಕಿರಣ್​ ನಥಿಂಗ್ ಟು ವರಿ. ಸ್ವಲ್ಪ ಪೆಟ್ಟಾಗಿದೆ. ಡಾಕ್ಟರ್ ಟ್ರೀಟ್ಮೆಂಟ್ ಕೊಡ್ತಿದ್ದಾರೆ. ದಯವಿಟ್ಟು ಯಾರು ಪ್ಯಾನಿಕ್ ಆಗ್ಬೇಡಿ. ನಾನು ಆರಾಮ ಆಗಿ ಇದ್ದೇನೆ. ಥ್ಯಾಂಕ್ ಯೂ ಆಲ್ ಅಂತ ಹೇಳಿದ್ದಾರೆ.  

ಕನ್ನಡತಿ ಮೂಲಕ ಇಡೀ ಕನ್ನಡಿಗರ ಮನೆ ಹಾಗೂ ಮನವನ್ನು ತಲುಪಿದ ನಟ ಕಿರಣ್​​​ ರಾಜ್ ಅವರ ಸಿನಿಮಾ ರಿಲೀಸ್​ ಆಗುತ್ತಿದೆ.​​​ ನಾಳೆ ರಾಜ್ಯಾದ್ಯಂತ ಬಹುನೀರಿಕ್ಷಿತ ಸಿನಿಮಾ ರಾನಿ ರಿಲೀಸ್​ ಆಗುತ್ತಿದೆ. ಆದರೆ, ಇದರ ಮಧ್ಯೆ ನಟ ಕಿರಣ್ ರಾಜ್​ ಕಾರಿಗೆ ಅಪಘಾತವಾಗಿದೆ.  ಕಿರಣ್​ ರಾಜ್​ ಜೊತೆಯಲ್ಲಿದ್ದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಸೀಟ್ ಬೆಲ್ಟ್ ಹಾಕಿಕೊಂಡಿದ್ದರಿಂದ ಸೇಫ್ ಆಗಿದ್ದಾರೆ.

ಈಗಾಗಲೇ ನಟ ಕಿರಣ್​ ರಾಜ್ ಅವರು ಅಸತೋಮ ಸದ್ಗಮಯ, ಬಡ್ಡೀಸ್, ಭರ್ಜರಿ ಗಂಡು, ಮಾರ್ಚ್​ 22 ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಗ್ಯಾಂಗ್​ಸ್ಟರ್​ ಕಥೆಯಲ್ಲಿ ಡಾನ್​ ಪಾತ್ರದಲ್ಲಿ ನಟಿಸಿರುವ ಕಿರಣ್ ರಾಜ್ ಜಬರ್​ದಸ್ತ್ ಆ್ಯಕ್ಷನ್ ಮೂಲಕ ಗಮನ ಸೆಳೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟಿ ಮಲೈಕಾ ಅರೋರಾ ತಂದೆ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ