Publish Date: Tue, 11 Aug 2020 (23:16 IST)
Updated Date: Tue, 11 Aug 2020 (23:20 IST)
ಸ್ಯಾಂಡಲ್ ವುಡ್ ನಟ ವಿಜಯ್ ರಾಘವೇಂದ್ರ ಪ್ರವಾಸದ ವೇಳೆ ತಮ್ಮದಲ್ಲದ ತಪ್ಪಿಗೆ ಪೇಚಿಗೆ ಸಿಲುಕಿದ್ದಾರೆ.
ಭದ್ರಾ ಅಭಯಾರಣಕ್ಕೆ ಭೇಟಿ ನೀಡಿ ಬೆಂಗಳೂರಿಗೆ ಬರಬೇಕೆಂದು ಶಿವಮೊಗ್ಗದಲ್ಲಿ ತಮ್ಮ ಕಾರ್ ಗೆ ಪೆಟ್ರೋಲ್ ತುಂಬಿಸಿಕೊಳ್ಳಲು ಮುಂದಾಗಿದ್ದಾರೆ.
ಆದರೆ ಪೆಟ್ರೋಲ್ ಬದಲಿಗೆ ಡೀಸೆಲ್ ತುಂಬಿ ಎಡವಟ್ಟು ಮಾಡಿದ್ದಾರೆ ಪೆಟ್ರೋಲ್ ಪಂಪ್ ಸಿಬ್ಬಂದಿ.
ಆಗ, ಕ್ಷಮೆಯಾಚಿಸಿದ ಪೆಟ್ರೋಲ್ ಬಂಕ್ ಮಾಲೀಕರು, ಬೇರೊಂದು ಕಾರ್ ವ್ಯವಸ್ಥೆ ಕಲ್ಪಿಸಿದರು.