Select Your Language

Notifications

webdunia
webdunia
webdunia
webdunia

ತ್ರಿವಿಕ್ರಮ್ ಜೊತೆಗಿನ ಜೂನಿಯರ್ ಎನ್ ಟಿಆರ್ ಚಿತ್ರ ಸ್ಥಗಿತಗೊಳ್ಳಲು ಕಾರಣವೇನು?

ತ್ರಿವಿಕ್ರಮ್ ಜೊತೆಗಿನ ಜೂನಿಯರ್ ಎನ್ ಟಿಆರ್ ಚಿತ್ರ ಸ್ಥಗಿತಗೊಳ್ಳಲು ಕಾರಣವೇನು?
ಹೈದರಾಬಾದ್ , ಶನಿವಾರ, 17 ಏಪ್ರಿಲ್ 2021 (09:52 IST)
ಹೈದರಾಬಾದ್ : ನಟ ಜೂನಿಯರ್ ಎನ್ ಟಿಆರ್ ಆರ್ ಆರ್ ಆರ್ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಪೂರ್ಣಗೊಂಡ ಬಳಿಕ ಅವರು ತ್ರಿವಿಕ್ರಮ್ ಶ್ರೀನಿವಾಸ್ ಅವರೊಂದಿಗೆ ಚಿತ್ರ ಮಾಡಬೇಕಿತ್ತು.

ಈ ಚಿತ್ರವನ್ನು ಒಂದು ವರ್ಷದ ಹಿಂದೆ ಘೋಷಿಸಲಾಗಿತ್ತು. ಮತ್ತು ಶೀರ್ಷಿಕೆಯನ್ನು ಇಡಲಾಗಿತ್ತು. ಆದರೆ ನಿರ್ಮಾಪಕರು ಅದನ್ನು ಅಧಿಕೃತ ಘೋಷಣೆ ಮಾಡಿಲ್ಲ. ಆದರೆ ಈ ಯೋಜನೆ ಈಗ ಸ್ಥಗಿತಗೊಳಿಸಲಾಗಿದೆ. ಮತ್ತು ಜೂನಿಯರ್ ಎನ್ ಟಿಆರ್ ಕೊರಟಾಲ ಶಿವ ಅವರೊಂದಿಗೆ ಕೆಲಸ ಮಾಡಲು ಹೊರಟಿದ್ದಾರೆ ಎಂಬುದು ಬಹಿರಂಗಗೊಂಡಿದೆ.

ಆದರೆ ಜೂನಿಯರ್ ಎನ್ ಟಿಆರ್ ಈ ಚಿತ್ರದಿಂದ ಹೊರಬರಲು ಕಾರಣವೇನು? ತ್ರಿವಿಕ್ರಮ್ ಅವರೊಂದಿಗೆ ಏನಾಯಿತು ಎಂಬ ಕುತೂಹಲ ಹಲವರಿಗಿದೆ. ತ್ರಿವಿಕ್ರಮ್ ಅವರು ಪವನ್ ಕಲ್ಯಾಣ್ ಅವರ ಯೋಜನೆಗಳಲ್ಲಿ ನಿರತರಾಗಿರುವುದರಿಂದ ಈ ಯೋಜನೆಯನ್ನು ಪ್ರಾರಂಭಿಸಲು ತ್ರಿವಿಕ್ರಮ ಇನ್ನೂ ಸ್ವಲ್ಪ ಸಮಯ ಕೇಳಿದ್ದಾರೆ. ಆದರೆ ಜೂನಿಯರ್ ಎನ್ ಟಿಆರ್ ಗೆ ಚಿತ್ರವನ್ನು ಜೂನ್ ನಲ್ಲಿಯೇ ಪ್ರಾರಂಭಿಸಲು ಬಯಸಿದ್ದರಿಂದ ಈ ಯೋಜನೆ ರದ್ದಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ, ರಾಜಕಾರಣಿ ಪವನ್ ಕಲ್ಯಾಣ್ ಗೆ ಕೊರೊನಾ