Select Your Language

Notifications

webdunia
webdunia
webdunia
webdunia

ಸಾಯಿ ಪಲ್ಲವಿ ಹೇಳಿಕೆಯಿಂದ ವಿರಾಟ ಪರ್ವಂ ಗಳಿಕೆಗೆ ನಷ್ಟವಾಯ್ತಾ?

ಸಾಯಿ ಪಲ್ಲವಿ ಹೇಳಿಕೆಯಿಂದ ವಿರಾಟ ಪರ್ವಂ ಗಳಿಕೆಗೆ ನಷ್ಟವಾಯ್ತಾ?
ಹೈದರಾಬಾದ್ , ಭಾನುವಾರ, 19 ಜೂನ್ 2022 (08:50 IST)
ಹೈದರಾಬಾದ್: ಸಾಯಿ ಪಲ್ಲವಿ-ರಾಣಾ ದಗ್ಗುಬಟ್ಟಿ ಅಭಿನಯದ ವಿರಾಟ ಪರ್ವಂ ಮೊನ್ನೆಯಷ್ಟೇ ಬಿಡುಗಡೆಯಾಗಿತ್ತು. ಆದರೆ ಈ ಸಿನಿಮಾ ಬಿಡುಗಡೆಗೆ ಕೆಲವೇ ಕ್ಷಣಗಳ ಮೊದಲು ಸಾಯಿ ಪಲ್ಲವಿ ನೀಡಿದ್ದ ಹೇಳಿಕೆ ಚಿತ್ರದ ಗಳಿಕೆಗೆ ತೊಂದರೆ ಮಾಡಿತಾ ಎಂಬ ಅನುಮಾನ ಮೂಡಿದೆ.

ನಕ್ಸಲೈಟ್ ಗಳ ಕತೆಯಾಧಾರಿತ ಸಿನಿಮಾ ‘ವಿರಾಟ ಪರ್ವಂ’. ಈ ಸಿನಿಮಾದ ಟ್ರೈಲರ್ ಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ಬಿಡುಗಡೆ ಹಿಂದಿನ ದಿನ ಸಾಯಿ ಪಲ್ಲವಿ ಕಾಶ್ಮೀರ ಪಂಡಿತರ ಹತ್ಯೆ ಮತ್ತು ಗೋ ಸಾಗಣಿಕೆ ಮಾಡಿದವರ ಹತ್ಯೆ ಒಂದೇ ಎಂದು ಹೇಳಿಕೆ ನೀಡಿದ್ದರು.

ಆದರೆ ಈ ಹೇಳಿಕೆ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಕಾರಣಕ್ಕೆ ಬಾಯ್ಕಾಟ್ ವಿರಾಟ ಪರ್ವಂ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಕೂಡಾ ಆಗಿತ್ತು. ಇದರ ಬೆನ್ನಲ್ಲೇ ಚಿತ್ರ ಮೊದಲ ದಿನ ಆಂಧ್ರದಲ್ಲಿ ಕೇವಲ 5 ಕೋಟಿ ರೂ. ಗಳಿಕೆ ಮಾಡಿದೆ ಎಂಬ ಸುದ್ದಿಯಿದೆ. ಹೀಗಾಗಿ ಗಲ್ಲಾಪೆಟ್ಟಿಗೆಯಲ್ಲಿ ವಿರಾಟ ಪರ್ವಂ ಕೊಂಚ ಹಿನ್ನಡೆ ಅನುಭವಿಸಿದೆ ಎಂದೇ ಹೇಳಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ ಒಟಿಟಿ ರಿಲೀಸ್ ಗೆ ಸಿದ್ಧವಾಯ್ತು ಸಲಗ