Select Your Language

Notifications

webdunia
webdunia
webdunia
webdunia

ಮನೆಯೂಟ ಕೇಳುತ್ತಿರುವ ದರ್ಶನ್‌ಗೆ ಪತ್ನಿ ವಿಜಯಲಕ್ಷ್ಮೀ, ಬ್ಯಾಗ್ ತುಂಬಾ ತಂದಿದ್ದೇನು

ಮನೆಯೂಟ ಕೇಳುತ್ತಿರುವ ದರ್ಶನ್‌ಗೆ ಪತ್ನಿ ವಿಜಯಲಕ್ಷ್ಮೀ, ಬ್ಯಾಗ್ ತುಂಬಾ ತಂದಿದ್ದೇನು

Sampriya

ಬೆಂಗಳೂರು , ಸೋಮವಾರ, 12 ಆಗಸ್ಟ್ 2024 (16:15 IST)
Photo Courtesy X
ಬೆಂಗಳೂರು: ಚಿತ್ರದುರ್ಗಾದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರನ್ನು ಇಂದು ಪತ್ನಿ ವಿಜಯಲಕ್ಷ್ಮೀ ಅವರು ಭೇಟಿಯಾಗಿ, ಮಾತುಕತೆ ನಡೆಸಿದ್ದಾರೆ. ದರ್ಶನ್ ಅವರ ಅಕ್ಕನ ಮಗ ಚಂದನ್ ಜತೆ ಪರಪ್ಪನ ಅಗ್ರಹಾರಕ್ಕೆ ಬಂದಿರುವ ವಿಜಯಲಕ್ಷ್ಮೀ ಅವರು ತಮ್ಮ ಪತಿಗೆ ಹಣ್ಣುಗಳನ್ನು ತಂದಿದ್ದಾರೆ.

ಇನ್ನೂ ದರ್ಶನ್ ಅವರು ಜೈಲು ಸೇರಿ ಎರಡು ತಿಂಗಳಾಗಿದ್ದು, ಪ್ರತಿ ಸೋಮವಾರದಂದು ವಿಜಯಲಕ್ಷ್ಮೀ ಅವರು ಪತಿಯನ್ನು ಭೇಟಿಯಾಗಿ, ಸಮಾಧಾನ ಹೇಳಿ, ಕಾನೂನು ಹೋರಾಟದ ಬಗ್ಗೆ ಚರ್ಚಿಸುತ್ತಾರೆ.  ಅದಲ್ಲದೆ ಈಚೆಗೆ ಪತಿ ದರ್ಶನ್ ಅವರನ್ನು ಈ ಸಂಕಷ್ಟದಿಂದ ಪಾರು ಮಾಡುವಂತೆ ವಿಜಯಲಕ್ಷ್ಮೀ ಶಕ್ತಿದೇವತೆಗಳ ಮೊರೆ ಹೋಗಿದ್ದಾರೆ.

ಇದೀಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಪೊಲೀಸರು ಪ್ರಕರಣ ಸಂಬಂಧ ಪ್ರಮುಖ ಸಾಕ್ಷಗಳನ್ನು ವಶಪಡಿಸಿಕೊಂಡಿದ್ದಾರೆ. ಅದಲ್ಲದೆ ದರ್ಶನ್ ಅವರ ಪಾತ್ರ ಏನೆಂದು ಸೂಕ್ಷ್ಯಮವಾಗಿ ತನಿಖೆ ನಡೆಸುತ್ತಿದ್ದಾರೆ.  ಇಂದು ಹತ್ಯೆ ಪ್ರಕರಣದ ಎಫ್‌ಎಸ್‌ಎಲ್‌ ರಿಪೋರ್ಟ್‌ ಪೊಲೀಸರ ಕೈ ಸೇರಲಿದ್ದು, ಹತ್ಯೆ ನಡೆಸಲು ಡಿ ಗ್ಯಾಂಗ್‌ ನಡೆಸಿದ ಪ್ಲ್ಯಾನ್ ಹೊರಬೀಳಲಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಡಿವೋರ್ಸ್‌ ಬಗ್ಗೆ ಕೊನೆಗೂ ಮೌನ ಮುರಿದ ಅಭಿಷೇಕ್ ಬಚ್ಚನ್