Select Your Language

Notifications

webdunia
webdunia
webdunia
webdunia

ಕೊಲ್ಲೂರಿನ ಪವರ್ ಫುಲ್ ಪ್ರಸಾದ ದರ್ಶನ್ ಗೆ ತಲುಪಿಸಲಿರುವ ಪತ್ನಿ ವಿಜಯಲಕ್ಷ್ಮಿ

Darshan Thoogudeepa-Vijayalakshmi

Krishnaveni K

ಬೆಂಗಳೂರು , ಶನಿವಾರ, 27 ಜುಲೈ 2024 (11:29 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಗಾಗಿ ಕೊಲ್ಲೂರಿನಲ್ಲಿ ಪೂಜೆ ಮಾಡಿಸಿದ್ದ ವಿಜಯಲಕ್ಷ್ಮಿ ಪ್ರಸಾದವನ್ನು ಪತಿಗೆ ತಲುಪಿಸಲಿದ್ದಾರೆ.

ಬಂಧನದಲ್ಲಿರುವ ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮಿ ದರ್ಶನ್ ನಿನ್ನೆ ಕೊಲ್ಲೂರು ದೇವಾಲಯಕ್ಕೆ  ತೆರಳಿ ಪೂಜೆ ಸಲ್ಲಿಸಿದ್ದರು. ದರ್ಶನ್ ಹೆಸರಿನಲ್ಲಿ ನವಚಂಡಿಕಾ ಯಾಗ ನಡೆಸಿದ್ದರು. ಇದಕ್ಕೆ ಮೊದಲು ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು.

ತಮ್ಮ ಆಪ್ತರ ಜೊತೆ ದೇವಾಲಯಕ್ಕೆ ಬಂದಿದ್ದ ವಿಜಯಲಕ್ಷ್ಮಿ ಮಳೆಯ ನಡುವೆಯೂ ಪೂಜೆ ಸಲ್ಲಿಸಿದ್ದರು. ಬಳಿಕ ಅರ್ಚಕರೂ ದರ್ಶನ್ ಹೆಸರಿನಲ್ಲಿ ಪ್ರಾರ್ಥನೆ ನಡೆದಿರುವುದಾಗಿ ಮಾಹಿತಿ ನೀಡಿದ್ದರು. ಇದೀಗ ವಿಜಯಲಕ್ಷ್ಮಿ ಚಂಡಿಕಾಯಾಗದಲ್ಲಿ ಪಡೆದ ಪ್ರಸಾದವನ್ನು ದರ್ಶನ್ ಗೆ ತಲುಪಿಸಲಿದ್ದಾರಂತೆ.

ಸೋಮವಾರ ವಿಜಯಲಕ್ಷ್ಮಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ಕೊಲ್ಲೂರಿನ ಪವರ್ ಫುಲ್ ಪ್ರಸಾದವನ್ನು ದರ್ಶನ್ ಗೆ ತಲುಪಿಸಲಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ವಾರವಷ್ಟೇ ದಿನಕರ್ ತೂಗುದೀಪ ಜೊತೆ ಬಂದಿದ್ದ ವಿಜಯಲಕ್ಷ್ಮಿ ಪತಿಗೆ ಧೈರ್ಯ ತುಂಬಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಖ್ಯಾತ ನಟಿ ಪ್ರಣೀತಾ ಸುಭಾಷ್ ತಂದೆ ಡಾ ಸುಭಾಷ್ ಬಗ್ಗೆ ತಿಳಿದುಕೊಂಡರೆ ನಿಜಕ್ಕೂ ಹೆಮ್ಮೆಯಾಗುತ್ತದೆ: ರಕ್ತದಾನದಲ್ಲೇ ದಾಖಲೆ